ಮನೆ ಅಪರಾಧ ಅಪಘಾತ: ಒಂದೇ ಕುಟುಂಬದ ಮೂವರ ಸಾವು

ಅಪಘಾತ: ಒಂದೇ ಕುಟುಂಬದ ಮೂವರ ಸಾವು

0

ಕುಣಿಗಲ್‌ (Kunigal)- ಲಾರಿ-ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪತಿ, ಪತ್ನಿ, ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ರಾಜ್ಯ ಹೆದ್ದಾರಿ 33ರ ಅರಮನೆ ಹೊನ್ನಮಾಚನಹಳ್ಳಿ ಸಮೀಪ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ಶಾಮಿಯಾ ಮೊಹಲ್ಲಾದ ಸೈಯದ್‌ ಮೊಹಮದ್‌ ನಜ್ಮಿ(42), ನಾಜೀಯಾ(30) ಮತ್ತು ಸೈಯದ್‌ ಖುದ್‌ ಮೀರ್‌ ಹಸಿ(2) ಮೃತ ದುರ್ದೈವಿಗಳು. ತೀವ್ರವಾಗಿ ಗಾಯಗೊಂಡಿರುವ ಮಗು ಸೈಯದ್‌ ಖುದ್‌ ಮೀರ್‌ ನಬಿನನ್ನು(3) ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚನ್ನಪಟ್ಟಣದಲ್ಲಿ ಸೈಯದ್‌ ಮೊಹಮದ್‌ ನಜ್ಮಿ ಅವರು ಪತ್ನಿ ನಾಜೀಯಾ ಹಾಗೂ ಮಕ್ಕಳಾದ ಸೈಯದ್‌ ಖುದ್‌ ಮೀರ್‌ ನಬಿ, ಸೈಯದ್‌ಖುದ್‌ ಮೀರ್‌ ಹಸಿ ಅವರೊಂದಿಗೆ ರಂಜಾನ್‌ ಹಬ್ಬ ಮುಗಿಸಿಕೊಂಡು, ಹೆಂಡತಿ ಮನೆ ಭದ್ರಾವತಿಗೆ ಸ್ಯಾಂಟ್ರೋ ಕಾರಿನಲ್ಲಿ ತೆರಳುತ್ತಿದ್ದರು. ಹೈದರಾಬಾದ್‌ನಿಂದ ಕೇರಳಕ್ಕೆ ತೆರಳುತ್ತಿದ್ದ ಲಾರಿಯು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಹಿಂದಿನ ಲೇಖನಪಿಎಸ್‌ ಐ ಹಗರಣ: ತಲೆಮರೆಸಿಕೊಂಡಿರುವ 10 ಅಭ್ಯರ್ಥಿಗಳಿಗೆ ಸಿಐಡಿ ನೋಟಿಸ್‌
ಮುಂದಿನ ಲೇಖನಪಿಎಸ್‌ ಐ ಹಗರಣ: ಮತ್ತೊಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ; ಮೂವರ ಬಂಧನ