ಮನೆ ಅಪರಾಧ ಗಣರಾಜೋತ್ಸವ ಧ್ವಜಾರೋಹಣ ನಡೆಸಿ ವಾಪಸ್ಸಾಗುವ ವೇಳೆ ಅಪಘಾತ: ದಿನ್ನಳ್ಳಿ ಪಿಡಿಒಗೆ ಗಂಭೀರ ಗಾಯ

ಗಣರಾಜೋತ್ಸವ ಧ್ವಜಾರೋಹಣ ನಡೆಸಿ ವಾಪಸ್ಸಾಗುವ ವೇಳೆ ಅಪಘಾತ: ದಿನ್ನಳ್ಳಿ ಪಿಡಿಒಗೆ ಗಂಭೀರ ಗಾಯ

0

ಹನೂರು(Hanur): ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ವಾಪಸ್ಸಾಗುತ್ತಿದ್ದ ವೇಳೆ ಕೋಳಿ ಸಾಕಾಣಿಕೆಯ ಗೂಡ್ಸ್ ಆಟೋ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮಾಪುರ – ದಿನ್ನಳ್ಳಿ ಮಾರ್ಗ ಮಧ್ಯದಲ್ಲಿ ನಡೆದಿದೆ.

ದಿನ್ನಳ್ಳಿ ಪಿಡಿಒ ಸೋಮಶೇಖರ್ ಗಾಯಗೊಂಡ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ.

ಸೋಮಶೇಖರ್ ಅವರು ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ.

ಕೂಡಲೇ ಗಾಯಾಳುವನ್ನು ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆಯ ಆಸ್ಪತ್ರೆಗೆ ರವಾನಿಸಲಾಗಿದೆ.

ಹಿಂದಿನ ಲೇಖನಮೈಸೂರು: ಹೊಸ ಕಟ್ಟಡಕ್ಕೆ ಆರ್ ಆರ್ ನಂಬರ್ ನೀಡಲು ಲಂಚ ಪಡೆಯುತ್ತಿದ್ದ ಎಇಇ, ಎಇ ಲೋಕಾಯುಕ್ತ ಬಲೆಗೆ
ಮುಂದಿನ ಲೇಖನಎಲ್ಲಿ ಸ್ಪರ್ಧಿಸಬೇಕೆಂದು ಹೈಕಮಾಂಡ್ ನಿರ್ಧರಿಸಲಿದೆ: ಸಚಿವ ವಿ.ಸೋಮಣ್ಣ