ಮನೆ ಅಪರಾಧ ಲಕ್ಷಾಂತರ ರೂ ವಂಚನೆ ಆರೋಪ: ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ​ಮ್ಯಾನ್​ ವಿರುದ್ಧ ಎಫ್...

ಲಕ್ಷಾಂತರ ರೂ ವಂಚನೆ ಆರೋಪ: ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ​ಮ್ಯಾನ್​ ವಿರುದ್ಧ ಎಫ್ ಐ ಆರ್ ದಾಖಲು

0

ಬೆಂಗಳೂರು: ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇರೆಗೆ ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ​ಮ್ಯಾನ್​ ವಿರುದ್ಧ ನಗರದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾಲಪ್ಪ ಆಚಾರ್ ಗನ್​ಮ್ಯಾನ್​ ರಾಘವೇಂದ್ರ ಎಂಬವರು ಮಾಯಕೊಂಡ ಗ್ರಾಮ ಪಂಚಾಯತ್ ಟೆಂಡರ್ ಕೊಡಿಸುತ್ತೇನೆ ಅಂತಾ ಹೇಳಿ ಹೆಚ್.ರಾಜು ನಾಯ್ಕ್ ಅವರಿಗೆ ನಂಬಿಸಿದ್ದಾರೆ.

ಅಲ್ಲದೆ, 30 ಕೋಟಿ ವೆಚ್ಚದ ಟೆಂಡರ್​ಗೆ 12 ಪರ್ಸೆಂಟ್ ಕಮಿಷನ್ ಕೇಳಿದ್ದ ರಾಘವೇಂದ್ರ, ರಾಜು ನಾಯ್ಕ್ ಅವರಿಂದ ಅಡ್ವಾನ್ಸ್ ಆಗಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಬಳಿಕ ಟೆಂಡರ್ ಕೊಡಿಸದೆ ಸತಾಯಿಸ್ತಿದ್ದ ಹಾಲಪ್ಪ ಆಚಾರ್ ಗನ್ ಮ್ಯಾನ್ ರಾಘವೇಂದ್ರ, ಹಣ ವಾಪಸ್ ಕೇಳಿದ್ದಕ್ಕೆ ಕೇವಲ 4 ಲಕ್ಷ ಅಷ್ಟೇ ನೀಡಿದ್ದಾರೆ. ಇನ್ನುಳಿದ 6 ಲಕ್ಷ ಹಣ ನೀಡದೇ ವಂಚಿಸಿರುವ ಗನ್​ ಮ್ಯಾನ್ ರಾಘವೇಂದ್ರ ವಿರುದ್ಧ ರಾಜು ನಾಯ್ಕ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್ ​ಐಆರ್ ದಾಲಿಸಿಕೊಡಿದ್ದಾರೆ.

ಹಿಂದಿನ ಲೇಖನಮೈಸೂರು: ರೈತನ ಮೇಲೆ ಕಾಡಾನೆ ದಾಳಿ, ಗಂಭೀರವಾಗಿ ಗಾಯಗೊಂಡ ರೈತ
ಮುಂದಿನ ಲೇಖನವಕೀಲರು ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ನಿರ್ಧಾರ: ಪ್ರಜ್ವಲ್ ರೇವಣ್ಣ