ಮನೆ ರಾಜ್ಯ ನಟ ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ – ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ

ನಟ ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ – ಬೆನ್ನು ನೋವಿಗೆ ಫಿಸಿಯೋಥೆರಪಿ ಚಿಕಿತ್ಸೆಗೆ ಮನವಿ

0

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರೊ ನಟ ದರ್ಶನ್‌ಗೆ ಈ ಬಾರಿ ಬೆಳಕಿಲ್ಲದ ದೀಪಾವಳಿಯಾಗಿದೆ. ಇತ್ತ ಬೆನ್ನು ನೋವು ಹಿನ್ನೆಲೆ ಫಿಸಿಯೋಥೆರಪಿ ನೀಡಲು ಜೈಲಿನ ವೈದ್ಯರು ಪತ್ರ ಬರೆದಿದ್ದಾರೆ.

ಪ್ರತೀ ಭಾರೀ ಕುಟುಂಬದ ಜೊತೆ ದೀಪಾವಳಿ ಆಚರಣೆ ಮಾಡ್ತಿದ್ದ ನಟನಿಗೆ ಜೈಲಿನ ಕತ್ತಲು ಬೆಳಕನ್ನ ಕಸಿದಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ದರ್ಶನ್ ಅದ್ದೂರಿ ದೀಪಾವಳಿ ಆಚರಿಸ್ತಿದ್ರು. ಈ ಬಾರಿ ದರ್ಶನ್ ಬದುಕಿನಲ್ಲಿ ಬೆಳಕಿರದ ಕತ್ತಲೆಯ ದೀಪಾವಳಿಯಾಗಿದೆ. ಕಳೆದ ಬಾರಿ ದೀಪಾವಳಿ ಟೈಂಗೆ ಬಳ್ಳಾರಿ ಜೈಲಿಂದ ರಿಲೀಸ್ ಆಗಿ ಮನೆಯಲ್ಲೇ ರೆಸ್ಟ್ ಮಾಡುವಂತಾಗಿತ್ತು.

ಆದ್ರೀಗ ಮತ್ತೆ ಸೆಂಟ್ರಲ್ ಜೈಲಿನಲ್ಲಿರೋ ದರ್ಶನ್‌ಗೆ ದೀಪಾವಳಿ ಬೆಳಕನ್ನ ಕಸಿದುಕೊಂಡಿದ್ದು, ದರ್ಶನ್ ಈಗ ಸೆಲ್‌ನಲ್ಲಿ ಬೆಳಕು ನೋಡುವಂತಾಗಿದೆ. ಹಾಸಿಗೆ ದಿಂಬಿಲ್ಲ, ಕ್ವಾರಂಟೈನ್ ಸೆಲ್‌ನಲ್ಲೇ ಇರುವ ಅನಿವಾರ್ಯ ಸ್ಥಿತಿಯಲ್ಲಿದ್ದು, ಕನಿಷ್ಟ ಸೌಲಭ್ಯದ ವ್ಯವಸ್ಥೆ ಸರಿಯಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ಕೊಟ್ಟಿರೋ ವರದಿಯಿಂದ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ದರ್ಶನ್‌ಗೆ ಈಗಾಗ್ಲೇ ಬೆನ್ನು ನೋವಿಗೆ ಹೀಟಿಂಗ್ ಬೆಲ್ಟ್ ಹಾಗೂ ಚೇರ್ ನೀಡಲಾಗಿದೆ. ಈ ನಡುವೆ ಕೇಂದ್ರ ಕಾರಾಗೃಹ ಆಸ್ಪತ್ರೆ ಮುಖ್ಯ ವೈದ್ಯರು, ಸಿ.ವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. ಇತ್ತೀಚಿಗೆ ಜೈಲಿನಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ನಟ ದರ್ಶನ್‌ಗೆ ಮೊದಲು ಜೈಲಿನ ವೈದ್ಯರ ತಂಡ ಚಿಕಿತ್ಸೆ ನೀಡಿತ್ತು.

ಬಳಿಕ ಸಿ.ವಿ ರಾಮನ್ ಆಸ್ಪತ್ರೆ ಫಿಸಿಯೋಥೆರಪಿ ತಂಡದಿಂದ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ಅಗತ್ಯ ಇರುವವರೆಗೂ ಕಾರಾಗೃಹಕ್ಕೆ ವೈದ್ಯರ ತಂಡ ನಿಯೋಜಿಸಲು ಹಾಗೂ ಹೀಟಿಂಗ್ ಬೆಲ್ಟ್ ನೀಡಲು ಮನವಿ ಮಾಡಲಾಗಿದೆ. ಕಾನೂನು ಸೇವಾ ಪ್ರಾಧಿಕಾರದ ವರದಿಯಲ್ಲಿ ಬೆನ್ನು ನೋವಿನ ಬಗ್ಗೆಯೂ ಉಲ್ಲೇಖವಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

ಮತ್ತೊಂದೆಡೆ ದರ್ಶನ್ ಕಾನೂನಿನ ಹೋರಾಟಕ್ಕೆ ಪತ್ನಿ ವಿಜಯಲಕ್ಷ್ಮಿ ಬಿಟ್ಟು ಯಾರಿಂದಲೂ ಸಹಾಯದ ಮಾತಿಲ್ಲವಂತೆ. ಇದರಿಂದ ಬೇಸರಗೊಂಡು ಮೌನಕ್ಕೆ ಶರಣಾಗಿದ್ದು, ಬ್ಯಾರಕ್‌ನಲ್ಲಿ ಶಿಷ್ಯಂದಿರ ಬಳಿ ಆಗ್ಗಾಗ್ಗೆ ಬೇಸರ ವ್ಯಕ್ತಪಡಿಸುವ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿವೆ.