ಮನೆ ಕ್ರೀಡೆ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿ ಉದ್ಘಾಟಿಸಿದ ನಟ ಸುದೀಪ್

ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿ ಉದ್ಘಾಟಿಸಿದ ನಟ ಸುದೀಪ್

0

ಮೈಸೂರು(Mysuru): ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಮಹಾರಾಜ ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿಯನ್ನು ನಟ ಸುದೀಪ್ ಉದ್ಘಾಟಿಸಿದರು.

ಟ್ರೋಫಿ ಕೆಎಸ್ ಸಿಎ ಟಿ-20 ಟೂರ್ನಿಯ ಕಪ್ ಅನಾವರಣ ಮಾಡಿದ ನಟ ಸುದೀಪ್ ನಂತರ 6 ತಂಡಗಳ ನಾಯಕರುಗಳ ಹೆಸರನ್ನ ಪ್ರಕಟಿಸಿದರು.

ಮೈಸೂರು ಮಾನಸ ಗಂಗೋತ್ರಿಯ ಶ್ರೀಕಂಠ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಇದೇ ಭಾನುವಾರದಿಂದ ಟೂರ್ನಿ ಆರಂಭವಾಗಲಿದ್ದು, ಮೈಸೂರು ವಾರಿಯರ್ಸ್ ತಂಡದ  ನಾಯಕನಾಗಿ ಕರುಣ್ ನಾಯಕ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ ತಂಡಕ್ಕೆ ಮಾಯಂಕ್ ಅಗರ್ವಾಲ್, ಗುಲ್ಬರ್ಗ ಮೈಸ್ಟಿಕ್ ತಂಡಕ್ಕೆ ಮನೀಶ್ ಪಾಂಡೆ, ಶಿವಮೊಗ್ಗ ಸ್ಟ್ರೈಕರ್ಸ್ ತಂಡಕ್ಕೆ ಕೆ. ಗೌತಮ್, ಮಂಗಳೂರು ಯುನೈಟೆಡ್ ತಂಡಕ್ಕೆ  ಸಮರ್ಥ್, ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ವೇಗದ ಬೌಲರ್ ಅಭಿಮನ್ಯು ಮಿಥುನ್ ನಾಯಕರಾಗಿ ಆಯ್ಕೆಯಾದರು.

ಈ ವೇಳೆ ಆರು ತಂಡಗಳಿಗೆ ನಟ ಸುದೀಪ್ ಶುಭ  ಕೋರಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮೈಸೂರು ವಾರಿಯರ್ಸ್ ತಂಡದ ಆಟಗಾರರು ಭಾಗಿಯಾಗಿದ್ದರು.