ಮನೆ ರಾಜಕೀಯ ಉದ್ದೇಶಿತ ಸೋಲಾರ್‌ ಪ್ಯಾನೆಲ್‌ ಯೋಜನೆಯೊಂದಿಗೆ ಮೀನುಗಾರಿಕೆಯನ್ನು ಅಳವಡಿಸುವ ಸುಸ್ಥಿರ ವಿಧಾನಗಳ ಬಗ್ಗೆ ಸಲಹೆ ನೀಡಿ: ಸಚಿವ...

ಉದ್ದೇಶಿತ ಸೋಲಾರ್‌ ಪ್ಯಾನೆಲ್‌ ಯೋಜನೆಯೊಂದಿಗೆ ಮೀನುಗಾರಿಕೆಯನ್ನು ಅಳವಡಿಸುವ ಸುಸ್ಥಿರ ವಿಧಾನಗಳ ಬಗ್ಗೆ ಸಲಹೆ ನೀಡಿ: ಸಚಿವ ಎನ್‌ ಎಸ್‌ ಭೋಸರಾಜು

0

ಬೆಂಗಳೂರು: ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೆರೆಗಳ ಮೇಲೆ ಅಳವಡಿಸಲು ಉದ್ದೇಶಿಸಲಾಗಿರುವ ಸೋಲಾರ್‌ ಪ್ಯಾನೆಲ್‌ಗಳ ಜೊತೆಯಲ್ಲಿಯೇ ಮೀನುಗಾರಿಕೆಯನ್ನು ಅಳವಡಿಸುವ ಸುಸ್ಥಿರ ವಿಧಾನಗಳ ಬಗ್ಗೆ ಸಲಹೆಗಳನ್ನು ನೀಡಲು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಕರೆ ನೀಡಿದರು .

Join Our Whatsapp Group

ಇಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA), ಭಾರತ ಸರ್ಕಾರದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಮತ್ತು ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ “ಸುಸ್ಥಿರ ಮೀನುಗಾರಿಕೆ ಅಭಿವೃದ್ದಿಗಾಗಿ ನೀಲಿ ಕ್ರಾಂತಿ” ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೀನುಗಾರಿಕೆ ನಮ್ಮ ದೇಶದ ಆರ್ಥಿಕತೆಗೆ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಆಹಾರ ಸುರಕ್ಷತೆ, ಸ್ಥಳೀಯವಾಗಿ ಉದ್ಯೋಗವಕಾಶಗಳ ನಿರ್ಮಾಣ ಹಾಗೂ ಉತ್ತಮ ಪೌಷ್ಟಿಕತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಕ್ಷೇತ್ರದ ಕೊಡುಗೆ ಹೆಚ್ಚಾಗಿದೆ. 7 ನೇ ಪಂಚವಾರ್ಷಿಕ ಯೋಜನೆಯ ಅಡಿಯಲ್ಲಿ ಅಂದಿನ ಪ್ರಧಾನಿಗಳಾದ ರಾಜೀವ್‌ ಗಾಂಧಿ ಅವರು ಮೀನುಗಾರಿಕೆಗೆ ಪ್ರೋತ್ಸಾಹ ನೀಡಿದರು. ಈ ಪ್ರೋತ್ಸಾಹದಿಂದ ನಮ್ಮ ದೇಶದಲ್ಲಿ ಮೀನುಗಾರಿಕೆ ಕ್ಷೇತ್ರ ಬಹಳಷ್ಟು ಅಭಿವೃದ್ದಿಯಾಗಿದೆ. ಮೀನುಗಳ ಉತ್ಪಾದನೆಯ ಜೊತೆಯಲ್ಲೇ ಅವುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯತ್ತ ಹೆಚ್ಚಿನ ಗಮನ ಹರಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿರುವ ಕೆರೆಗಳ ಮೇಲೆ ಸೋಲಾರ್‌ ಪ್ಯಾನೆಲ್‌ಗಳ ಅಳವಡಿಕೆಗೆ ಮುಂದಾಗಿದ್ದೇವೆ. ಈ ಮೂಲಕ ಉತ್ತಮ ಸುಸ್ಥಿರವಾದ ಯೋಜನೆಯ ಮೂಲಕ ಪರಿಸರ ಸ್ನೇಹಿ ವಿದ್ಯುತ್‌ ಉತ್ಪಾದನೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆಯಲ್ಲಿಯೇ ಯಾವುದೇ ತೊಂದರೆ ಇಲ್ಲದೇ ಮೀನುಗಾರಿಕೆಯನ್ನು ನಡೆಸುವ ನಿಟ್ಟಿನಲ್ಲಿ ಸುಸ್ಥಿರ ವಿಧಾನಗಳ ಬಗ್ಗೆ ಅಧ್ಯಯನದ ಅಗತ್ಯವಿದೆ. ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾಗಿರುವ ತಜ್ಞರು ಈ ಬಗ್ಗೆ ಅಗತ್ಯ ಸಲಹೆಗಳನ್ನ ನೀಡುವಂತೆ ಸಚಿವರು ಕರೆ ನೀಡಿದರು.

ಒಳನಾಡು ಬಂದರು ಹಾಗೂ ಮೀನುಗಾರಿಕೆ ಸಚಿವರಾದ ಮಂಕಾಳ್‌ ಎಸ್‌ ವೈದ್ಯಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ನೇತೃತ್ವದ ಸರಕಾರ ರಾಜ್ಯದಲ್ಲಿ ಮೀನುಗಾರಿಕೆಗೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಸಮ್ಮೇಳನದಲ್ಲಿ 5 ರಾಜ್ಯಗಳ ಮೀನುಗಾರಿಕೆ ಕ್ಷೇತ್ರದ ತಜ್ಞರು ಪಾಲ್ಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್ ಫುಡ್‌ ಟೆಕ್ನಾಲಜಿ ವೈಸ್‌ ಚಾನ್ಸಲರ್‌ ಡಾ ಸಿ ವಾಸುದೇವ, ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ದಿನೇಶ್‌ ಕುಮಾರ್‌, ಕೆಎಸ್‌ಟಿಎ ಸಿಇಓ ಡಾ. ಎ.ಎಂ ರಮೇಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.