ಮನೆ ಅಪರಾಧ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣ: 211 ಮಂದಿ ಗುರುತು ಪತ್ತೆ 189 ಮೃತದೇಹ ಹಸ್ತಾಂತರ

ಏರ್ ಇಂಡಿಯಾ ವಿಮಾನ ದುರಂತ ಪ್ರಕರಣ: 211 ಮಂದಿ ಗುರುತು ಪತ್ತೆ 189 ಮೃತದೇಹ ಹಸ್ತಾಂತರ

0

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ೨೭೦ ಮಂದಿಯ ಪೈಕಿ ಡಿಎನ್‌ಎ ಪರೀಕ್ಷೆಯ ಮೂಲಕ ೨೧೧ ಮಂದಿಯ ಗುರುತನ್ನು ಪತ್ತೆಹಚ್ಚಲಾಗಿದೆ. ಈವರೆಗೆ ೧೮೯ ಮಂದಿಯ ಮೃತದೇಹವನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಇಲ್ಲಿನ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ರಾಕೇಶ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `೧೪೨ ಮಂದಿ ಭಾರತೀಯರ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ೩೨ ಮಂದಿ ಬ್ರಿಟಿಷ್ ಪ್ರಜೆಗಳ, ಪೋರ್ಚುಗೀಸ್‌ನ ೭ ಮಂದಿಯ ಮತ್ತು ಕೆನಡಾದ ಒಬ್ಬ ಪ್ರಜೆಯ ಮೃತದೇಹಗಳನ್ನೂ ಅವರವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಅವಘಡ ನಡೆದಾಗ ಆಸ್ಪತ್ರೆ ಸಂಕೀರ್ಣದಲ್ಲಿ ಮೃತಪಟ್ಟವರ ಪೈಕಿ ೭ ಮಂದಿಯ ಮೃತದೇಹಗಳನ್ನೂ ಆಯಾ ಕುಟುಂಬದವರಿಗೆ ತಲುಪಿಸಲಾಗಿದೆ’ ಎಂದಿದ್ದಾರೆ.

೨೪೨ ಮಂದಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಯನ್ನೊಳಗೊಂಡಿದ್ದ ಏರ್ ಇಂಡಿಯಾ ವಿಮಾನವು ಜೂನ್ ೧೨ರಂದು ಅಹಮದಾಬಾದ್‌ನಲ್ಲಿ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿದ್ದ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿತ್ತು.