ಮನೆ ಅಪರಾಧ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿ ಆಂಬ್ಯುಲೆನ್ಸ್ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು

ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿ ಆಂಬ್ಯುಲೆನ್ಸ್ ಪಲ್ಟಿ: ಚಾಲಕ ಸ್ಥಳದಲ್ಲೇ ಸಾವು

0

ಕುಣಿಗಲ್:  ಮಂಗಳೂರಿಗೆ ಶವ ಸಾಗಿಸಿ ಬೆಂಗಳೂರಿಗೆ  ವಾಪಸ್ಸ್ ಹೊಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್  ಪಲ್ಟಿಯಾಗಿ, ಚಾಲಕನ್ನು ಸ್ಥಳದಲ್ಲೇ ಮೃತಪಟ್ಟಿರುವ  ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಎಡಿಯೂರು ಹೋಬಳಿ ಅಗ್ರಹಾರ ಗೇಟ್ ಬಳಿ ಮಂಗಳವಾರ(ಜು.2 ರಂದು) ಬೆಳಗ್ಗೆ  ಸಂಭವಿಸಿದೆ.

Join Our Whatsapp Group

ಬೆಂಗಳೂರು ಮೂಲದ ಶ್ರೀಕಾಂತ್ ( 26) ಮೃತ ಚಾಲಕ.

ಶ್ರೀಕಾಂತ್ ಹಾಗೂ ವೆಂಕಟೇಶ್ ಇಬ್ಬರು ಚಾಲಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಮೃತ ಶವವನ್ನು ಮಂಗಳೂರಿಗೆ ರವಾನಿಸಿ, ವಾಪಸ್ಸ್ ಬೆಂಗಳೂರಿಗೆ ಬರಬೇಕಾದರೇ ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿಯಾದ ಪರಿಣಾಮ ಚಾಲಕ ಶ್ರೀಕಾಂತ್ ಕಿಟಕಿಯಿಂದ ಹೊರಬಿದ್ದು, ಕಿಟಕಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಮೃತ್ತೂರು ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಟಿಪ್ಪರ್‌ -ಸ್ಕೂಟರ್‌ ನಡುವೆ ಅಪಘಾತ: ಚಿಕಿತ್ಸೆ ಫಲಕಾರಿಯಾಗದೆ ಸ್ಕೂಟರ್‌ ಸವಾರ ಸಾವು
ಮುಂದಿನ ಲೇಖನಲೈಂಗಿಕ ಕ್ರಿಯೆಗೆ ಅಸಮರ್ಥ, ವರದಕ್ಷಿಣೆ ಕಿರುಕುಳ ಆರೋಪಿಸಿ ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದು