ಮನೆ ರಾಜ್ಯ ಸ್ವಾತಂತ್ರ್ಯದ ಅಮೃತ ಮಹೋತ್ಸವ: ಓಟದ ಸ್ಪರ್ಧೆ 

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಓಟದ ಸ್ಪರ್ಧೆ 

0

ಮೈಸೂರು(Mysuru): ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಎನ್‌ಸಿಸಿ, ಎನ್‌ಎಸ್‌ಎಸ್‌ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಓಟದ ಸ್ಪರ್ಧೆ ನಡೆಸಲಾಯಿತು.

ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ಭಟ್‌ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಭಾಸ್ಕರ್ ಮತ್ತು ಮಧುಸೂದನ್, ಎನ್‌ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ನಿಖಿಲ್ ಬಿ.ಆರ್. ಮತ್ತು ಲೆಫ್ಟಿನೆಂಟ್ ಎಂ.ಆರ್.ಇಂದ್ರಾಣಿ, ಎನ್‌ಎಸ್ಎಸ್‌ ಯೋಜನೆ ಘಟಕ 1 ಮತ್ತು 2ರ ಸಂಚಾಲಕ ಡಾ.ದೊಡ್ಡರಸಯ್ಯ ಜಿ. ಮತ್ತು ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್ ಕೆ.ಕೆ. ಪಾಲ್ಗೊಂಡಿದ್ದರು.

ಸ್ಪರ್ಧೆಯ ಫಲಿತಾಂಶ ಇಂತಿದೆ:

ಮಹಾಜನ ಪ್ರೌಢಶಾಲೆ ಕಿರಿಯ ವಿದ್ಯಾರ್ಥಿಗಳ ವಿಭಾಗ: ಪ್ರಥಮ- ದಕ್ಷತ್ ಪಿ., ದ್ವಿತೀಯ- ಹಿತೇಷ್ ಬಿ.ಎಲ್. ಮತ್ತು ತೃತೀಯ- ದುರ್ಗಪ್ರಸಾದ್

ಎಚ್.ಪಿ.ಮಹಾಜನ ಪ್ರೌಢಶಾಲೆ ಕಿರಿಯ ವಿದ್ಯಾರ್ಥಿನಿಯರ ವಿಭಾಗ: ಪ್ರಥಮ- ತುಳಸಿ ಕೆ.ಆರ್., ದ್ವಿತೀಯ- ವಿನುತಾ ಸಿ., ತೃತೀಯ- ಸಂಗೀತಾ ಕೆ.ಟಿ.

ಕಾಲೇಜು ವಿದ್ಯಾರ್ಥಿಗಳ ವಿಭಾಗ: ಪ್ರಥಮ- ಮಿಲಿಂದ್ ಎಸ್. ಪ್ರಸಾದ್, ದ್ವಿತೀಯ-ಸಾಗರ್ ಎಂ.ಕೆ., ತೃತೀಯ- ಹೇಮಂತ್ ಎಂ.ಎಸ್.

ಕಾಲೇಜು ವಿದ್ಯಾರ್ಥಿನಿಯರ ವಿಭಾಗ: ಪ್ರಥಮ- ನಿಸ್ಸಿ ಮೊಲ್, ದ್ವಿತೀಯ- ಹರ್ಷಿನಿ ಚಿತಿಯಾರ್ ಆರ್., ತೃತೀಯ- ನಿಸ್ಸಿ ಫಿಲಿಪ್.

ಹಿಂದಿನ ಲೇಖನನಟಿ ಶ್ರೀದೇವಿ ಜನ್ಮದಿನ: ಭಾವನಾತ್ಮಕ ಪೋಸ್ಟ್ ಹಾಕಿದ ಜಾನ್ವಿ ಕಪೂರ್
ಮುಂದಿನ ಲೇಖನಮುಂದಿನ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ ಶಿಖರ್ ಧವನ್