ಮನೆ ಪೌರಾಣಿಕ ಅಧಿಪತಿಗಳ ನೇಮಕ

ಅಧಿಪತಿಗಳ ನೇಮಕ

0

    ಮೆನುವಿನ ಮಗನಾದ ಪೃಥು ಚಕ್ರವರ್ತಿಯನ್ನು ಮುನಿಗಳು ತಂದು ಸಿಂಹಾಸನದ ಮೇಲೆ ಅಧಿರೋಹಿಸಿದ ಮೇಲೆ ಬ್ರಹ್ಮ ಲೋಕದಲ್ಲಿ ಒಂದೊಂದು ಕಾರ್ಯಕ್ಕೂ ಒಬ್ಬೊಬ್ಬ ಅಧಿಕಾರಿಯನ್ನು ನಿಯಮಿಸಿದನು   ಚಂದ್ರನು ಅಧಿಪತಿಯಾಗಿ ಮಾಡಿ, ಆತನಿಗೆ ಗ್ರಹಗಳು, ನಕ್ಷತ್ರಗಳು, ವಿಪ್ರರು, ವೃಕ್ಷಗಳು, ಲತೆಗಳು, ನಿಕುಂಜಗಳು ತಪಸ್ಸುಗಳು,ಯಜ್ಞಗಳಿಗೆ ಅಧಿಪತ್ಯವನ್ನು ಪ್ರಾಸಾಧಿಸಿದನು. ಭೂಮಿಯನ್ನು ಪರಿಪಾಲಿಸುವ ಮಹಾರಾಜರಿಗೆ ವೈಶ್ರವಣನಾದ ಕುಬೇರನನ್ನು ಜಲಕ್ಕೆ ಮರುಣ ದೇವನನ್ನು,ಅದಿತ್ಯರಿಗೆ ಇಂದ್ರಾನುಜನಾದ ವಿಷ್ಣುವನ್ನು ನಿಯಮಿಸಿದನು. ಅಷ್ಟವಸುರರಿಗೆ ಪಾವಕಾಗ್ನಿಯನ್ನು ಪ್ರಜಾಪತಿಗಳಿಗೆ ದಕ್ಷ ಪ್ರಜಾಪತಿಯನ್ನು ಮರುದ್ಗಣರಿಗೆ ವಾಸವವನ್ನು ಮುನಿಂದ್ರರಿಗೆ ಕಪಿಲ ಮಹರ್ಷಿಯನ್ನು ದೈತ್ಯ ದಾನವರಿಗೆ ದಿತಿಗೂ ಧನುವಿಗೆ ಕಶ್ಯಪ ಪ್ರಜಾ ವತಿಯಿಂದ ಜನಿಸಿದ ಸಂತಾನ ಪ್ರಹ್ಲಾದನನ್ನು  ಅಧಿಪತಿಗಳನ್ನಾಗಿ ಮಾಡಿದನು. ಯಮನು ಪಿತೃಗಣಗಳಿಗೂ ಐರಾವತ,ಆನೆಗಳಿಗೂ, ಪಕ್ಷಿಗಳಿಗೆ,ಗುರುತ್ಮಂತನನ್ನು, ಮಹಾಸರ್ಪಗಳಿಗೆ ವಾಸುಕಿಯನ್ನು, ಕುದುರೆಗಳಿಗೆ ಉಚ್ಚೈಶ್ರವವನ್ನು ವೃಷಭವನ್ನು ವೃಷಭವನ್ನು,,ಮೃಗಗಳಿಗೆ ಕೇಸರಿಯನ್ನು,ಮನಸ್ವತಿಗಳಿಗೆ ಪ್ಲಕ್ಷವನ್ನು, ಪರ್ವತಗಳಿಗೆ ಹಿಮಾಲಯವನ್ನು ಬ್ರಹ್ಮನದಯೆಯಿಂದ ಅಧಿಪತ್ಯವನ್ನು ಪಡೆದ ಜಾತ್ಯಾಭಿವೃದ್ಧಿಯನ್ನು  ಮುಂದುವರಿಸಿದರು.

Join Our Whatsapp Group

       ಮೈತ್ರೇಯಾ ಈ ರೀತಿಯಾಗಿ ವಿಷ್ಣುವಿನ ಅಂಶಾಅವತಾರವಾಗಿ ಜನಿಸಿ, ಅಧಿಪತ್ಯವನ್ನು ವಹಿಸಿದ ಇವರೆಲ್ಲರ ಪರಿಪಾಲನಾ ವಿಶೇಷಗಳನ್ನು ಪ್ರತಿಯೊಬ್ಬರ ಜೀವನದ ಸನ್ನಿವೇಶಗಳನ್ನು ಕುರಿತು ಸಮೀಕ್ಷಾ ರೂಪದಲ್ಲಿ ಲಘುವಾಗಿ ಹೇಳುವುದಕ್ಕೆ ಯಾರಿಂದಲೂ ಸಾಧ್ಯವಲ್ಲ.ಮಗೂ ಈ ಸಮಸ್ತ ಸೃಷ್ಟಿಯೂ ವಾಸುದೇವನ ಲೀಲಾ ವಿಳಾಸವೆ ಆಗಿದೆ ಸಕಲ  ಚರಾಚರಗಳ ಜೀವನ ಕಷ್ಟ ಸುಖಗಳು ಆತನ ಆಜ್ಞಾವಶರೇ ಆಗಿದ್ದಾರೆ.ಈ ಕಾಲ ಸ್ವರೂಪವೆಲ್ಲಾ ಆತನ ಮಹಿಮೆಯೇ ಆಗಿದೆ. ಉತ್ತರಾಯಣ, ದಕ್ಷಿಣಾಯಣಗಳು, ಪಾಡ್ಯಮಿ,ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಟಿ, ಸಪ್ತಮಿ,ಅಷ್ಟಮಿ,ನವಮಿ, ದಶಮಿ, ಏಕಾದಶಿ, ದ್ವಾದಶೀ, ತ್ರಯೋದಶಿ, ಚತುರ್ದಶಿ, ಪೌರ್ಣಿಮೆ, ಅಮಾವಾಸ್ಯ, ಶುಕ್ಲ ಪಕ್ಷ, ಕೃಷ್ಣ ಪಕ್ಷಗಳು, ಚೈತ್ರ,ವೈಶಾಖ, ಜ್ಯೇಷ್ಠ, ಆಶಾಢಾ, ಶ್ರಾವಣ, ಭದ್ರಪದ,ಅಶ್ವಯಜ, ಕಾರ್ತಿಕ,ಮಾರ್ಗಶಿರ, ಪುಷ್ಯ, ಮಾಘ, ಪಾಲ್ಗುಣ ಮಾಸಗಳು ಪ್ರಭಾವಾದಿ ಸಂವತ್ಸರಗಳು ಕಳ,ಕ್ಷಣ,ಕಾಷ್ಟ ನಿಷಾಮಿದಿಗಳಾದ ಕಾಲಗಳು ಆತನ ಅಭಿವ್ಯಕ್ತ ರೂಪಗಳನ್ನೇ ಆಗಿವೆ.ಈ ಅನಂತ ಬ್ರಹ್ಮಾಂಡವು ಸಪ್ತ ದ್ವೀಪಗಳು, ಸಮಸ್ತ ನದಿಗಳು ಸಮುದ್ರಗಳಿಂದ ಕೂಡಿದ ಪ್ರಕೃತಿ ಸರ್ವಸ್ವವು ಆತನ ಆ ಜ್ಞಾನ ಮೂರ್ತಿಗಳೇ ಆಗಿವೆ. ಮುಂತಾದ ಜೀವರಾಶಿಯು ಈ ಪರಾತ್ವರನ ಕರುಣೆಯೇ ನಿರ್ದರ್ಶನ .

      ಸದ್ಗುರುಗಳಿಂದ ಉಪದೇಶ ಪೂರಕವಾಗಿ ಗ್ರಹಿಸಿದ ಆಧ್ಯಾತ್ಮ  ವಿದ್ಯೆಗಳು, ಧರ್ಮ ರಕ್ಷಣೆಗಾಗಿ ಲೋಕ ಸಮರ್ಪಣೆಗಾಗಿ ಆಚರಿಸುವ ಮಹಾಯಜ್ಞಗಳು,ಪರಮಾನಂದ ಅನುಭಾಗ ಅನುಭವಕ್ಕಾಗಿ ವಿರಕ್ತಿ ಮಾರ್ಗಕ್ಕೆ ಪರವೇಶಿಸಿ ಅನುಷ್ಠಾನ ಮಾಡುವ ಜಪತಪ ಗಳು ಇವೆಲ್ಲರದರಲ್ಲಿಯೂ ಪಠಿಸಲ್ಪಡುವ ರಹಸ್ಯ ಮಂತ್ರ ವಾಜ್ಞಯ ಸ್ವರ್ವಸ್ವವೂ ವಾಸುದೇವನ ಅನಂತ ಶಕ್ತಿಯನ್ನು ಶಬ್ದ ರೂಪದಲ್ಲಿ ನಿರೂಪಿಸುತ್ತಿದೆ.ಪಂಚಭೂತಗಳು ತನ್ಮಾತ್ರ ಗುಣಗಳು, ಕರ್ಮೇಂದ್ರಿಯ, ಮುದ್ದೀಂದ್ರಿಯಗಳು ಮುಂತಾದ ಸಚರಾಚರ  ಪ್ರಪಂಚವೆಲ್ಲಾ ಶ್ರೀಮನ್ನಾರಾಯಣನ ದಿವ್ಯ ಕೃಪಾ ದೀನ, ಋಗ್ವೇದ, ಯಜುರ್ವೇದ, ಸಮವೇದ,ಅರ್ವಣ ವೇದಗಳು, ವೇದಾಂತ ರಹಸ್ಯಗಳು,ನೀತಿಶಾಸ್ತ್ರ ಗಳು, ಮನ್ವಾದಿಗಳು ನಿಯಮಿಸಿದ ಧರ್ಮಶಾಸ್ತ್ರಗಳು, ಪುರಾಣಗಳು,ಉಪ ಪುರಾಣಗಳು ಅನುವಾಕಗಳು ಕಾವ್ಯಾ ಲಾಪಗಳು, ಸಂಗೀತಾದಿ ವಿದ್ಯೆಗಳು ಅರವತ್ತು ನಾಲ್ಕು ವ್ರತಗಳು.  ವ್ರತಕಲ್ಪಗಳು, ಮೂರ್ತಾ ಮೂರ್ತಿಗಳು ಎಲ್ಲವೂ ಆ ಪುರುಷೋತ್ತಮನ ಮೂರ್ತಿ ಭೇದಗಳನ್ನಾಗಿ ಬೆಳಗುತ್ತಿವೆ.ಈ ಮಹಾವಿಷ್ಣು ಸರ್ವಾತ್ಮಗಳಿಗೂ ಆಧಿದೇವರು, ಆತನನ್ನು ನಂಬಿದವರಿಗೆ ಯಾವ ಆಪತ್ತುಗಳು ಇಲ್ಲ. ನಿರ್ಮಲ ಚಿತ್ತದಿಂದ ಈ ಮಹಾನುಭಾವನನ್ನು ಆರಾಧಿಸಿದ ಭಕ್ತರಿಗೆ ಕಷ್ಟಗಳು ನಾಶವಾಗಿ ಕರ್ಮಾಂತರದಲ್ಲಿ ಭಗವಂತನ ಸಾಯುಜ್ಯ ಭಾಗ್ಯವು ಉಂಟಾಗುತ್ತದೆ. ಈ ಪುರಾಣವನ್ನು ಭಕ್ತಿ ಶ್ರದ್ಧೆಗಳೊಂದಿಗೆ ಪಠಿಸಿದ.ಆಲಿಸಿದ ಪುಣ್ಯಾತ್ಮರಿಗೆ ಕಾರ್ತಿಕ ಮಾಸದಲ್ಲಿ ವೈಷ್ಣವಥವನ್ನು 12 ವರ್ಷಗಳು ನಿಯಮ ನಿಷ್ಠೆಗಳೊಂದಿಗೆ ಆಚರಿಸಿ, ಪುಷ್ಕರಣಿಯಲ್ಲಿ ತೀರ್ಥ ಸ್ಥಾನವನ್ನು ಮಾಡಿದ ಮಹಾಪಲವು ಲಭಿಸುತ್ತದೆ ಎಂದು ಪರಾಶರ ಮಹರ್ಷಿಯು ಶ್ರೀ ವಿಷ್ಣು ಮಹಿಮೆಯನ್ನು ಹೇಳಿದನು.