Saval TV on YouTube
ಯಾದಗಿರಿ(Yadagiri): ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವುನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ.
ಬಿಲ್ವಿದ್ಯೆ ಕ್ರೀಡಾಪಟುಗಳಾದ ವೆಂಕಟೇಶ (21) ದೇವರಗೋನಾಲ ನಿವಾಸಿ, ನಾರಾಯಣ (20) ಶಿರಸಿ ನಿವಾಸಿ ಮೃತ ದುರ್ದೈವಿಗಳು.
ಉಳಿದಂತೆ ಐದು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಂಟಂನಲ್ಲಿ ಸುರಪುರದಿಂದ ದೇವರಗೋನಾಲ ಕಡೆ ತೆರಳುತ್ತಿದ್ದಾಗ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.














