ಬೆಂಗಳೂರು: ಎಫ್ ಎಂ ಎಸ್ ಸಿ ಐ ರೇ ಭಾರತೀಯ ರಾಷ್ಟ್ರೀಯ ರ್ಯಾಲಿ ಸ್ಪ್ರಿಂಟ್ ಚಾಂಪಿಯನ್ ಶಿಪ್ ದಕ್ಷಿಣ ವಲಯ ಸುತ್ತಿನಲ್ಲಿ ಬೆಂಗಳೂರಿನ ರಾಜೇಂದ್ರ. ಆರ್ ಪ್ರಥಮ ಸ್ಥಾನ ಪಡೆದರು.
550 ಸಿಸಿ ಮುಕ್ತ ವಿಭಾಗದಲ್ಲಿ ರಾಜೇಂದ್ರ ಅತ್ಯುತ್ತಮ ಸಮಯದೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ. ನಗರದ ಹೊರವಲಯದಲ್ಲಿರುವ ಸರ್ಜಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ 10 ಕಿಲೋ ಮೀಟರ್ ದೂರವನ್ನು ಕೇವಲ 7 ನಿಮಿಷ 33.59 ಸೆಕೆಂಡ್ ಗಳಲ್ಲಿ ರಾಜೇಂದ್ರ ರವರು ಪೂರ್ತಿಗೊಳಿಸಿದ್ದರು.
ರ್ಯಾಲಿಯ ಟಿ20 ಮಾದರಿ ಎಂದೇ ಕರೆಸಿಕೊಳ್ಳುವ ಸ್ಪ್ರಿಂಟ್ ರೇಸ್ ನಲ್ಲಿ ಭಾರತದ ಅನೇಕ ಪ್ರಮುಖ ಬೈಕರ್ ಗಳು ಕಣಕ್ಕಿಳಿದು, ರೇಸ್ ಅನ್ನು ಯಶಸ್ವಿಗೊಳಿಸಿದರು. 550 ಸಿಸಿವರೆಗಿನ ವಿಭಾಗದ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ಸುಹೇಲ್, ಆ ಬಳಿಕ ಬುಲೆಟ್ ವಿಭಾಗದಲ್ಲಿ 2ನೇ ಹಾಗೂ 261 ಸಿಸಿಯಿಂದ 400ಸಿಸಿವರೆಗಿನ ರೇಸ್ ನಲ್ಲಿ 3ನೇ ಸ್ಥಾನ ಪಡೆದರು.
550 ಸಿಸಿ ಓಪನ್ ವಿಭಾಗ ಸೇರಿ ಎರಡು ವಿಭಾಗಗಳಲ್ಲಿ ಸಿನಾನ್ ಫ್ರಾನ್ಸಿಸ್ ಸಹ ಅಮೂಲ್ಯ ಅಂಕಗಳನ್ನು ಕಲೆಹಾಕಿದರು.
ಮಹಿಳೆಯರ 260 ಸಿಸಿ ವರೆಗಿನ ವಿಭಾಗದಲ್ಲಿ ಯುವ ಹಾಗೂ ಉತ್ಸಾಹಿ ಸ್ಪರ್ಧಿಗಳನ್ನು ಹಿಂದಿಕ್ಕಿ ರೀಹಾನಾ ಪ್ರಶಸ್ತಿ ಎತ್ತಿಹಿಡಿದರು. ಇವರು 8 ನಿಮಿಷ 49.29 ಸೆಕೆಂಡ್ ಗಳಲ್ಲಿ ರೇಸ್ ಪೂರ್ತಿಗೊಳಿಸಿದರು.
ಫಲಿತಾಂಶಗಳು:
ಮುಕ್ತ ವಿಭಾಗ 550 ಸಿಸಿ ವರೆಗೂ: 1. ರಾಜೇಂದ್ರ. ಆರ್ (07:33.59),
ಗುಂಪು ‘ಎ’ 550 ಸಿಸಿ ವರೆಗೂ: 1. ಸುಹೇಲ್ ಅಹ್ಮದ್ (07:51.57), 2. ಸಿನಾನ್ ಫ್ರಾನ್ಸಿಸ್, 3. ಕೌಸ್ತುಭ ಎಂ.
ಗುಂಪು ‘ಬಿ’ 261 ಸಿಸಿ ಯಿಂದ 400 ಸಿಸಿ: 1. ನರೇಶ್ ವಿ.ಎಸ್ (08:09.32), 2. ಅಖಂಡ ಪ್ರತಾಪ್ ಸಿಂಗ್, 3. ಸುಹೇಲ್ ಅಹ್ಮದ್.
ಗುಂಪು ‘ಸಿ’ 166 ಸಿಸಿ ಯಿಂದ 260 ಸಿಸಿ: 1. ಸಚಿನ್ ಡಿ (07:51.61 ), 2. ಯೋಗೇಶ್ ಪಿ., 3. ನಿತ್ಯನ್ ಎಲ್.
ಗುಂಪು ‘ಡಿ’ 131 ಸಿಸಿ ಯಿಂದ 165 ಸಿಸಿ: 1. ವರುಣ್ ಕುಮಾರ್ (08:12.09), 2. ಅಬ್ರಾರ್ ಪಾಷಾ, 3. ಭರತ್ ಎಲ್.















