ಮುಂಬಯಿ: ʼದಿ ಕೇರಳ ಸ್ಟೋರಿʼ ಮೂಲಕ ಸುದ್ದಿಯಾದ ನಿರ್ದೇಶಕ ಸುದೀಪ್ತೋ ಸೇನ್ ಅವರ ಮತ್ತೊಂದು ಸತ್ಯ ಘಟನಾ ಆಧಾರಿತ ʼಬಸ್ತಾರ್ʼ ಸಿನಿಮಾದ ಟೀಸರ್ ಮಂಗಳವಾರ(ಫೆ.6 ರಂದು) ರಿಲೀಸ್ ಆಗಿದೆ.
ನಟಿ ಅದಾ ಶರ್ಮಾ ಐಪಿಎಸ್ ಅಧಿಕಾರಿ ನೀರ್ಜಾ ಮಾಧ್ವನ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಝಲಕ್ ನ್ನು ಟೀಸರ್ ನಲ್ಲಿ ತೋರಿಸಲಾಗಿದೆ.
ಪಾಕಿಸ್ತಾನದಲ್ಲಿ ಆದ 4 ಯುದ್ಧಗಳಲ್ಲಿ ನಮ್ಮ 8738 ಯೋಧರು ಹುತ್ಮಾತರಾಗಿದ್ದಾರೆ. ಆದರೆ ನಮ್ಮ ದೇಶದೊಳಗೆ ನಕ್ಸಲರು 1,500 ಯೋಧರನ್ನು ಹತಗೈದಿದ್ದಾರೆ. ಇದನ್ನು ನಮ್ಮ ದೇಶದೊಳಗೆ ಸಂಭ್ರಮಿಸಲಾಗುತ್ತದೆ. ಜೆಎನ್ ಯು ನಲ್ಲಿ ಇದರ ಸಂಭ್ರಮವನ್ನು ಮಾಡಲಾಗುತ್ತದೆ. ಈ ರೀತಿಯ ಯೋಚನೆ ಎಲ್ಲಿಂದ ಬರುತ್ತದೆ. ಈ ದೇಶದ್ರೋಹಿಗಳನ್ನು ನಮ್ಮ ದೇಶದಿಂದ ಮುಗಿಸಲು ಪ್ರಮಾಣ ಮಾಡುತ್ತೇನೆ. ಜೈ ಹಿಂದ್” ಎಂದು ಹೇಳುವ ದೃಶ್ಯವನ್ನು ತೋರಿಸಲಾಗಿದೆ.
ಅದಾ ಶರ್ಮಾ ಅವರ ಪಾತ್ರವನ್ನು ಮಾತ್ರ ಟೀಸರ್ ನಲ್ಲಿ ತೋರಿಸಲಾಗಿದೆ. ಕೇರಳ ಸ್ಟೋರಿ ಬಳಿಕ ಅದಾ ಶರ್ಮಾ ಮತ್ತೊಂದು ಸವಾಲಿನ ಪಾತ್ರವನ್ನು ಮಾಡುತ್ತಿದ್ದಾರೆ.
ʼಬಸ್ತಾರ್ʼ ಛತ್ತೀಸ್ಗಢ ರಾಜ್ಯದ ಒಂದು ಜಿಲ್ಲೆ ಆಗಿದೆ. ಬುಡಕಟ್ಟು ಜನಸಂಖ್ಯೆಗೆ ಈ ಜಿಲ್ಲೆ ಹೆಸರುವಾಸಿಯಾಗಿದೆ. ಇಲ್ಲಿನ ಬುಡಕಟ್ಟು ಜನ ಈಗಲೂ ಕೂಡ ಹೊರಗಿನವರ ಬಳಿ ಅಷ್ಟಾಗಿ ಸಂಪರ್ಕ ಸಾಧಿಸದೆ ದಟ್ಟ ಕಾಡಿನಲ್ಲೇ ವಾಸಿಸುತ್ತಿದ್ದಾರೆ. ಇಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿ ಕಂಡು ಬರುತ್ತದೆ. ಇದೇ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.
ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾಕ್ಕೆ ವಿಪುಲ್ ಅಮೃತಲಾಲ್ ಶಾ ನಿರ್ಮಾಣ ಮಾಡುತ್ತಿದ್ದಾರೆ.
ಇದೇ ವರ್ಷ ಸಿನಿಮಾ ತೆರೆಕಾಣುವ ಸಾಧ್ಯತೆಯಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.