ಮನೆ ರಾಜ್ಯ ನಂದಿಬೆಟ್ಟ, ಸ್ಕಂದಗಿರಿ ಟ್ರೆಕಿಂಗ್, ಪಿಕ್​ನಿಕ್ ಹೋಗೋ ಮುಂಚೆ ಎಚ್ಚರ..!

ನಂದಿಬೆಟ್ಟ, ಸ್ಕಂದಗಿರಿ ಟ್ರೆಕಿಂಗ್, ಪಿಕ್​ನಿಕ್ ಹೋಗೋ ಮುಂಚೆ ಎಚ್ಚರ..!

0

ಚಿಕ್ಕಬಳ್ಳಾಪುರ : ಕಳೆದ ಹಲವು ದಿನಗಳಿಂದ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹುಲಿ, ಚಿರತೆ ದಾಳಿಗಳು ಹೆಚ್ಚಿವೆ. ಅದರಂತೆಯೇ ಚಿಕ್ಕಬಳ್ಳಾಪುರ ನಗರ ಹೊರವಲಯದ ಬಳಿ ಚಿರತೆಗಳ ಹಿಂಡೇ ಕಾಣಿಸಿಕೊಂಡಿದೆ. ಈ ಚಿರತೆಗಳು ಗ್ರಾಮದಲ್ಲಿನ ಹಸು, ನಾಯಿಗಳನ್ನು ಬೇಟೆಯಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ನಂದಿಬೆಟ್ಟ, ಸ್ಕಂದಗಿರಿ ಸೇರಿ ಹಲವು ಬೆಟ್ಟಗುಡ್ಡಗಳಿಂದ ಕೂಡಿರುವ ಈ ಜಿಲ್ಲೆಯಯಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ವಿರಳವಾಗಿದೆ. ಹೀಗಿರುವಾಗ ಭಾನುವಾರ (ನ.30) ತಿಪ್ಪೇನಹಳ್ಳಿ ಗ್ರಾಮದ ಕಲ್ಲು ಬಂಡೆಗಳ ಮೇಲೆ ಚಿರತೆಗಳು ಕಾಣಿಸಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ಚಿರತೆಗಳ ಹಿಂಡು ಬೀಡುಬಿಟ್ಟಿದ್ದು, ಪ್ರತಿದಿನ ಒಂದೊಂದು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಸೇರಿದಂತೆ ಇತ್ತೀಚೆಗೆ ಹಲವು ಜಾಗಗಳಲ್ಲಿ ಚಿರತೆಗಳು ಕಾಣಸಿಗುತ್ತಿವೆ. ಚಿಕ್ಕಮಗಳೂರಿನ ತರೀಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಂಡುಬಂದ ಚಿರತೆ ಮಕ್ಕಳ ಮೇಲೆ ‌ದಾಳಿ ಮಾಡಿತ್ತು. ಓರ್ವ ಬಾಲಕಿಯನ್ನು ಬಲಿ ಪಡೆದು ಮತ್ತೊಬ್ಬ ಬಾಲಕನ ಮೇಲೆ ‌ದಾಳಿ ಮಾಡಿದ್ದ ಚಿರತೆಯನ್ನು ಜೀವಂತ ಅಥವಾ ಜೀವ ರಹಿತವಾಗಿ ಹಿಡಿಯಲು ಅರಣ್ಯ ಇಲಾಖೆಗೆ ಮುಂದಾಗಿತ್ತು. ಈ ವೇಳೆ ಸೆರೆ ಹಿಡಿಯಲು ತೆರಳಿದ್ದ ಸಿಬ್ಬಂದಿ ಮೇಲೆ ಚಿರತೆ ದಾಳಿಗೆ ಯತ್ನಿಸಿದ್ದು, ಗುಂಡು ಹಾರಿಸಿ‌ ಚಿರತೆಯನ್ನು ಹತ್ಯೆ ಮಾಡಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಮುದ್ದೇನಹಳ್ಳಿಯ ವಿಟಿಯು ಕಾಲೇಜು ಕ್ಯಾಂಪಸ್, ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆಗಳು ಕಾಣಿಸಿವೆ ಎಂದು ತಿಳಿದು ಬಂದಿದೆ. ಚಿರತೆಗಳು ನಗರದ ಹಲವೆಡೆ ನಾಯಿಗಳು, ಹಸು, ನವಿಲುಗಳನ್ನು ಬೇಟೆಯಾಡಿದ್ದು, ಇದರಿಂದ ರೈತರು ತಮ್ಮ ತೋಟಗಳಿಗೆ ಹೋಗಲೂ ಹಿಂದೇಟು ಹಾಕುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆಗಳು ಮನುಷ್ಯರನ್ನು ಕಂಡರೆ ಭಯ ಬೀಳುತ್ತವೆ. ಯಾರೂ ಹೆದರುವ ಅವಶ್ಯಕತೆಯಿಲ್ಲ. ಚಿರತೆಗಳು ಕಾಣಿಸಿದರೆ ಏನು ಮಾಡಬೇಡಿ, ನಮಗೆ ತಿಳಿಸಿ ಎಂದಿದ್ದಾರೆ.