ಮನೆ ಅಪರಾಧ ಪ್ರೀತಿಸಿ  ಕೈ ಕೊಟ್ಟ ಪ್ರಿಯಕರ, ನೊಂದ ಯುವತಿ ಆತ್ಮಹತ್ಯೆಗೆ ಶರಣು

ಪ್ರೀತಿಸಿ  ಕೈ ಕೊಟ್ಟ ಪ್ರಿಯಕರ, ನೊಂದ ಯುವತಿ ಆತ್ಮಹತ್ಯೆಗೆ ಶರಣು

0

 ಮೈಸೂರು : ಪ್ರಿಯಕರ ಕೈಕೊಟ್ಟಿದ್ಷಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಅರ್. ನಗರ ತಾಲೂಕು ಗೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ನಿಸರ್ಗ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. 4 ವರ್ಷದಿಂದ ಸುಹಾಸ್ ರೆಡ್ಡಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಪ್ರಿಯಕರ ಸುಹಾಸ್ ರೆಡ್ಡಿ, ನಿಸರ್ಗಳೊಂದಿಗೆ ಎಲ್ಲಾ ಕಡೆ ಸುತ್ತಾಡಿ ಬಳಿಕ ಕೈಕೊಟ್ಟಿದ್ದಾನೆ.

ನಂತರ ಮತ್ತೋರ್ವ ಯುವತಿಯನ್ನು ಪ್ರೀತಿಸುತ್ತಿದ್ದ.

ನಿಸರ್ಗ ಈ ವಿಚಾರವನ್ನು ಸುಹಾಸ್ ತಂದೆ -ತಾಯಿಗೆ ಹೇಳಿದರೂ ಸ್ಪಂದಿಸದೇ ಅವಮಾನಿಸಿದ್ದಾರೆಂದು ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ನನ್ನ ಸಾವಿಗೆ ಅನನ್ಯ, ಸುಹಾಸ್ ಹಾಗೂ ತಂದೆ ಗೋಪಾಲಕೃಷ್ಣ ಕಾರಣ. ಅವರನ್ನು ಸುಮ್ಮನೆ ಬಿಡಬೇಡಿ ಅಪ್ಪ, ನನ್ನನ್ನು ಕ್ಷಮಿಸಿಬಿಡಿ ಎಂದು ಡೆತ್ ನೋಟ್ ನಲ್ಲಿ ಹೇಳಿದ್ದಾಳೆ.

ಸಾವಿಗೆ ಮುನ್ನ ಕೈ ಕೊಯ್ದುಕೊಂಡು ನೊಂದ ಯುವತಿ ರೀಲ್ಸ್ ಮಾಡಿದ್ದಾಳೆ. ಬಳಿಕ ವಿಷಸೇವಿಸಿ ಅಸ್ಪತ್ರೆಗೆ ದಾಖಲಾಗಿದ್ದ ನಿಸರ್ಗ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ನಿಸರ್ಗ ಡೆತ್ ನೋಟ್ ಆಧರಿಸಿ ಕೆ.ಆರ್.ನಗರ ಪೊಲೀಸರು ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಹಿಂದಿನ ಲೇಖನ“ನಮ್ಮ ಶಾಲೆ ಮಕ್ಕಳಿಗೆ ಹೆಬ್ಬುಲಿ ಹೇರ್ ಕಟ್ ಮಾಡ್ಬೇಡಿ”: ಸಲೂನ್ ಮಾಲೀಕನಿಗೆ ಹೆಡ್‌ ಮಾಸ್ಟರ್ ಪತ್ರ
ಮುಂದಿನ ಲೇಖನಬುಕ್ಕಿಂಗ್ ಕಿಂಗ್ ಮಾರುತಿ ಜಿಮ್ನಿಗೆ ಸಖತ್ ಡಿಮ್ಯಾಂಡ್