ಮನೆ ರಾಜ್ಯ ಬೆಂಗಳೂರು: ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಲೈನ್​ ಮ್ಯಾನ್​ ಬಲಿ

ಬೆಂಗಳೂರು: ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಲೈನ್​ ಮ್ಯಾನ್​ ಬಲಿ

0

ಬೆಂಗಳೂರು: ವಿದ್ಯುತ್ ತಂತಿ ತಗುಲಿ ಮಹಿಳೆ ಮತ್ತು ಮಗು ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದ್ದು, ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಲೈನ್​ ಮ್ಯಾನ್​ ಬಲಿಯಾಗಿರುವ ಘಟನೆ ಬೆಂಗಳೂರು ಪೂರ್ವ ತಾಲೂಕಿನ ಚೀಮಸಂದ್ರ ಬಳಿ ನಡೆದಿದೆ.

ಫ್ಯೂಸ್‌ ಬದಲಾವಣೆ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಸಿದ್ದರಾಜು (32) ಮೃತಪಟ್ಟಿದ್ದಾರೆ.

ಲೈನ್‌ ಮ್ಯಾನ್ ಸಿದ್ದರಾಜು ಮಧ್ಯಾಹ್ನ ಲೈನ್ ಸರಿಪಡಿಸಲು ಹೋಗಿದ್ದರು. ಲೈನ್ ಸರಿಪಡಿಸುವುದಕ್ಕಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಹೇಳಿದ್ದರು. ಬೆಸ್ಕಾಂ ಕಚೇರಿ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ, ಸಿದ್ದರಾಜು ಅವರು ದುರಸ್ತಿ ಮಾಡಲಿರುವ ಲೈನ್‌ ಬದಲಾಗಿ ಬೇರೆ ಲೈನ್ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆಂದು ಕಂಬ ಹತ್ತಿದ್ದ ಲೈನ್‌ ಮ್ಯಾನ್, ವಿದ್ಯುತ್‌ ಶಾಕ್‌ನಿಂದ ಲೈನ್‌ ಮ್ಯಾನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಿದರಹಳ್ಳಿಯ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಮೃತದೇಹ ಸ್ಥಳಾಂತರಗೊಳಿಸಲಾಗಿದೆ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಿಂದಿನ ಲೇಖನ“ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರ ವಿಮರ್ಶೆ
ಮುಂದಿನ ಲೇಖನ“ಮನ್ ಕಿ ಬಾತ್”: ನಾಳೆ ಮೈಸೂರು ರೈಲು ನಿಲ್ದಾಣದಲ್ಲಿ ನೇರ ಪ್ರಸಾರ