ಮನೆ ಅಪರಾಧ ಬೆಂಗಳೂರು: ಸ್ಕೂಟರ್‌’ಗೆ ಜೋತುಬಿದ್ದ ಚಾಲಕನ ಎಳೆದೊಯ್ದ ಸವಾರ

ಬೆಂಗಳೂರು: ಸ್ಕೂಟರ್‌’ಗೆ ಜೋತುಬಿದ್ದ ಚಾಲಕನ ಎಳೆದೊಯ್ದ ಸವಾರ

0

ಬೆಂಗಳೂರು(Bengaluru): ಮಾಗಡಿ ರಸ್ತೆಯ ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸ್ಕೂಟರ್‌’ಗೆ ಜೋತುಬಿದ್ದ ವ್ಯಕ್ತಿಯೊಬ್ಬರನ್ನು ದ್ವಿಚಕ್ರ ವಾಹನ ಸವಾರ ರಸ್ತೆಯಲ್ಲೇ ಎಳೆದೊಯ್ದಿದ್ದಾನೆ.

ಟೋಲ್ ಗೇಟ್ ಬಳಿ ಟಾಟಾ ಸುಮೋಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್​ ಸವಾರ ಗುದ್ದಿದ್ದಾನೆ. ಟಾಟಾ ಸುಮೋ‌‌ ಡ್ರೈವರ್ ಪ್ರಶ್ನಿಸುತ್ತಿದ್ದಂತೆ ಬೈಕ್ ಹತ್ತಿ ಎಸ್ಕೇಪ್ ಆಗಲು ಬೈಕ್ ಸವಾರ ಮುಂದಾಗಿದ್ದಾನೆ.

ತಪ್ಪಿಸಿಕೊಂಡು ಹೋಗಲು ಬೈಕ್​ ಸವಾರನ್ನು ನೋಡಿದಾಗ ಟಾಟಾ ಸುಮೋ‌‌ ಡ್ರೈವರ್ ಬೈಕ್​ ಅನ್ನು ಹಿಡಿದು ಕೊಂಡಿದ್ದಾರೆ. ಬೈಕನ್ನು ಹಿಡಿದಿದ್ದ ಚಾಲಕನನ್ನು ಎಳೆದುಕೊಂಡು ಹೋಗಿದ್ದಾನೆ. ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದ ವರೆಗೆ ದರ ದರನೆ ಎಳೆದೊಯ್ದಿದ್ದಾನೆ. ವಯಸ್ಸಾದ ಚಾಲಕನನ್ನ ಬೈಕ್​’ನಲ್ಲಿ ಎಳೆದೊಯ್ತುತ್ತಿರುವುದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ.

ರಸ್ತೆಯಲ್ಲೇ ಚಾಲಕರನ್ನು ಎಳೆದುಕೊಂಡು ಹೋಗಿದ್ದರಿಂದ ತೀವ್ರ ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯ ಎಸಗಿದ್ದ ಸ್ಕೂಟರ್ ಸವಾರನನ್ನು ವಶಕ್ಕೆ ಪಡೆದಿರುವ ಪೊಲೀಸರು, ಗೋವಿಂದರಾಜನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.