ಮನೆ ಅಪರಾಧ ಬೆಂಗಳೂರು: ಹಿಟ್ ಅಂಡ್ ರನ್ ‘ಗೆ ಯುವಕ ಬಲಿ

ಬೆಂಗಳೂರು: ಹಿಟ್ ಅಂಡ್ ರನ್ ‘ಗೆ ಯುವಕ ಬಲಿ

0

ಬೆಂಗಳೂರು(Bengaluru): ಹಿಟ್ ಆ್ಯಂಡ್ ರನ್​’ಗೆಬಾಪಿ ಕುಮಾರ್ (23) ಎಂಬ ಯುವಕ ಬಲಿಯಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣ ನಗರದಲ್ಲಿ ನಡೆದಿದೆ.

ನ.11ರ ರಾತ್ರಿ 11 ಗಂಟೆ ಸುಮಾರಿಗೆ ಯುವಕನ ಮೇಲೆ ಕ್ಯಾಂಟರ್ ಹರಿದು ಯುವಕ ಸಾವನಪ್ಪಿದ್ದಾನೆ. ಈ ಸಂಬಂಧ ಸ್ಥಳೀಯರು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಪಿ ಕುಮಾರ್, ನಿನ್ನೆ ರಾತ್ರಿ 11 ಗಂಟೆಗೆ ಹೆಬ್ಬಾಳ ರಿಂಗ್ ರಸ್ತೆಯನ್ನು ದಾಟುತ್ತಿದ್ದ. ಈ ವೇಳೆ ಹೆಬ್ಬಾಳದ ಕಡೆಯಿಂದ ಕೆ.ಆರ್. ಪುರಂ ಕಡೆಗೆ ಬರುತ್ತಿದ್ದ ಕ್ಯಾಂಟರ್ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಯ ಮೇಲೆ ಬಿದ್ದು ಬೆನ್ನಿನ ಹಿಂಭಾಗ, ಸೊಂಟ ಮತ್ತು ಹೊಟ್ಟೆಗೆ ಬಲವಾದ ಗಾಯವಾಗಿದೆ.

ಅಪಘಾತ ಮಾಡಿದ ವಾಹನ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದು ಸಾರ್ವಜನಿಕರ ಸಹಾಯದಿಂದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಿಸದೆ ಬಾಪಿ ರಾತ್ರಿ 11.50 ಕ್ಕೆ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಮಾಡಿದ ವಾಹನ ಪತ್ತೆಯಾಗಿ ಪೊಲೀಸರು ಮುಂದಾಗಿದ್ದಾರೆ. ಇನ್ನು ಅಪಘಾತದ ವೇಳೆ ಕ್ಯಾಂಟರ್ ಹಿಂದೆ ಬರುತ್ತಿದ್ದ ಕಾರಿನ ಕ್ಯಾಮರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.

ಹಿಂದಿನ ಲೇಖನಪ್ರೀತಿಸಿ ಮದುವೆ ನಿರಾಕರಿಸುವುದು ಐಪಿಸಿ 420 ಅಡಿ ವಂಚನೆಯಲ್ಲ: ಹೈಕೋರ್ಟ್
ಮುಂದಿನ ಲೇಖನಚಾಮರಾಜನಗರ: ಸೋರುವ ಛಾವಣಿಯಡಿ ಮಕ್ಕಳಿಗೆ ಪಾಠ