ಮನೆ ಅಪರಾಧ ಬಿಡದಿ: ಹೆರಿಗೆ ಮಾಡಿಸಿದ್ದಕ್ಕೆ 6 ಸಾವಿರ ಲಂಚಕ್ಕೆ ಬೇಡಿಕೆ- ಇಬ್ಬರು ವೈದ್ಯರ ಅಮಾನತು

ಬಿಡದಿ: ಹೆರಿಗೆ ಮಾಡಿಸಿದ್ದಕ್ಕೆ 6 ಸಾವಿರ ಲಂಚಕ್ಕೆ ಬೇಡಿಕೆ- ಇಬ್ಬರು ವೈದ್ಯರ ಅಮಾನತು

0

ಬಿಡದಿ/ ರಾಮನಗರ: ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದಕ್ಕೆ 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ವೈದ್ಯರನ್ನು ಆರೋಗ್ಯ ಇಲಾಖೆಯು ಸೇವೆಯಿಂದ ಅಮಾನತು ಮಾಡಿದೆ.

ಪ್ರಕರಣ ಸಂಬಂಧ ಇಬ್ಬರು ವೈದ್ಯರನ್ನು ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯ ಸೇವೆಯಿಂದ ಅಮಾನತುಗೊಂಡವರು.

ಬಿಡದಿ ನಿವಾಸಿ ಮಂಜುನಾಥ್‌ ಎಂಬುವರ ಪತ್ನಿ ರೂಪಾ ಅವರಿಗೆ ನಾಲ್ಕು ದಿನದ ಹಿಂದೆ ಬಿಡದಿ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿತ್ತು. ಬಾಣಂತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ವೇಳೆಗೆ ವೈದ್ಯರು 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಒಪ್ಪದ ಮಂಜುನಾಥ್‌ ‘ನನ್ನ ಬಳಿ  2 ಸಾವಿರ ಮಾತ್ರವೇ ಇದೆ’ ಎನ್ನುತ್ತಾರೆ.

ಆದರೆ ವೈದ್ಯರು ಮೂರು ಜನರಿಗೂ ತಲಾ 2 ಸಾವಿರ ಕೊಡಬೇಕು. ನೀವು ಬರೀ 2 ಸಾವಿರ ಕೊಟ್ಟರೆ ನಾವು ಎಲ್ಲರಿಗೂ 500 ಹಂಚಲು ಆಗಲ್ಲ. ನೀವು ಒಬ್ಬರು ಹೀಗೆ ಮಾಡಿದರೆ ವಾರ್ಡಿನಲ್ಲಿ ಇರುವ ಎಲ್ಲರಿಗೂ ಹಾಗೆಯೇ ಮಾಡುತ್ತಾರೆ. ನಾವು ಹಾಗೆಲ್ಲ ಬೇಧ ಮಾಡಲು ಆಗದು ಎನ್ನುತ್ತಾರೆ. ಈ ಎಲ್ಲವನ್ನೂ ಮಂಜುನಾಥ್‌ ತಮ್ಮ ಮೊಬೈಲ್ ಮೂಲಕ ವಿಡಿಯೊ ರೆಕಾರ್ಡ್‌ ಮಾಡಿಕೊಂಡಿದ್ದಾರೆ.