ಮನೆ ರಾಜ್ಯ ದಾಖಲೆಯ ಮಳೆಗೆ ಬೀದರ್ ತತ್ತರ – ತೋಟಗಾರಿಕೆ ಬೆಳೆಗಳು ನಾಶ..!

ದಾಖಲೆಯ ಮಳೆಗೆ ಬೀದರ್ ತತ್ತರ – ತೋಟಗಾರಿಕೆ ಬೆಳೆಗಳು ನಾಶ..!

0

ಬೀದರ್ : ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಬೀದರ್ ಜಿಲ್ಲೆ ತತ್ತರಿಸಿ ಹೋಗಿದ್ದು, 5 ಕೋಟಿ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.

ಬೀದರ್ ತಾಲೂಕಿನ ಟಿ.ಮರ್ಜಾಪೂರ್ ಗ್ರಾಮದ ಮಾಣಿಕ್ಯರಾವ್ ಪಾಟೀಲ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ನಿಂಬೆಹಣ್ಣು, ಸೀಬೆ ಹಣ್ಣು, ಪಪ್ಪಾಯ ಹಾಗೂ ತರಕಾರಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಮಳೆ ಪಾಲಾಗಿವೆ.

600 ನಿಂಬೆಹಣ್ಣು, 400 ಸೀಬೆ ಹಣ್ಣು, 200 ಮಾವಿನಕಾಯಿ ಸೇರಿದಂತೆ ಹಲವು ಹಣ್ಣುಗಳು ನೆಲಕ್ಕೆ ಬಿದ್ದು ಕೊಳೆತು ಹೋಗಿವೆ. ಒಟ್ಟು 5 ಲಕ್ಷ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.

ಜಿಲ್ಲೆಯಾದ್ಯಂತ 5 ಕೋಟಿ ರೂ.ಗೂ ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಇದರಿಂದ ನೊಂದ ರೈತರು ಪರಿಹಾರ ಕೊಡಿ ಇಲ್ಲ ಸಾಯಲು ಬಿಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.