ಮನೆ ರಾಜ್ಯ ರಸ್ತೆ ಮಧ್ಯೆ ಕಬ್ಬಿಣದ ಡಿವೈಡರ್ ಮೂಲಕ ವಿದ್ಯುತ್ ಪ್ರವಹಿಸಿ ಬೈಕ್ ಸವಾರ ಸಾವು

ರಸ್ತೆ ಮಧ್ಯೆ ಕಬ್ಬಿಣದ ಡಿವೈಡರ್ ಮೂಲಕ ವಿದ್ಯುತ್ ಪ್ರವಹಿಸಿ ಬೈಕ್ ಸವಾರ ಸಾವು

0

ಹಾಸನ: ಅಂಗಡಿಗೆ ಹೋಗಬೇಕೆಂದು ವ್ಯಕ್ತಿಯೋರ್ವ ಬೈಕ್​ ಸೈಡಿಗೆ ಹಾಕಿ ರಸ್ತೆ ಕ್ರಾಸ್​ ಮಾಡುವಾಗ ಕಬ್ಬಿಣದ ಡಿವೈಡರ್ ಮೂಲಕ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬೇಳಗುಂಬ ಗೇಟ್ ಬಳಿಯ, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಡೆದಿದೆ.

ಹುಣಸೆಘಟ್ಟ ಗ್ರಾಮದ ನಿವಾಸಿ ರವಿ (45) ಮೃತ ದುರ್ದೈವಿ.

ಕಳೆದ ರಾತ್ರಿ (ಆ.10) ರವಿ, ಅಂಗಡಿಗೆ ಹೋಗಲು ಬೈಕ್​ ಸೈಡಿಗೆ ಹಾಕಿದ್ದು, ಬಳಿಕ ರಸ್ತೆ ಮಧ್ಯದಲ್ಲಿ ಅಳವಡಿಸಿದ್ದ ಕಬ್ಬಿಣದ ಡಿವೈಡರ್ ದಾಟು ವೇಳೆ ಏಕಾಏಕಿ ಕರೆಂಟ್ ಶಾಕ್ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಸಾವಿಗೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಾರೆ.

ಹಿಂದಿನ ಲೇಖನಅರಣ್ಯಾ ಧಿಕಾರಿಗಳು ಇರಿಸಿದ್ದ ಬೋನಿಗೆ ಚಿರತೆ ಸೆರೆ
ಮುಂದಿನ ಲೇಖನಗೃಹಿಣಿ  ಅನುಮಾನಾಸ್ಪದ  ಸಾವು