ಮನೆ ರಾಜ್ಯ ಬಿಜೆಪಿ ಜನೋತ್ಸವ: ವಿಘ್ನ ನಿವಾರಣೆಗೆ ವೇದಿಕೆ ಮೇಲೆ ಗಣ, ವಿಷ್ಣು ಹೋಮ

ಬಿಜೆಪಿ ಜನೋತ್ಸವ: ವಿಘ್ನ ನಿವಾರಣೆಗೆ ವೇದಿಕೆ ಮೇಲೆ ಗಣ, ವಿಷ್ಣು ಹೋಮ

0

ದೊಡ್ಡಬಳ್ಳಾಪುರ(Doddaballapura): ಬಿಜೆಪಿಯ ಜನೋತ್ಸವ ಕಾರ್ಯಕ್ರಮ ಪದೇ ಪದೇ ಮುಂದೂಡಿಕೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆ ನಿಗದಿಯಾಗಿರುವ ಕಾರ್ಯಕ್ರಮ  ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನಡೆಯಲೆಂದು ವೇದಿಕೆ ಮೇಲೆ ಗಣ ಮತ್ತು ವಿಷ್ಣು ಹೋಮ ಮಾಡಲಾಯಿತು.

ಬಿಜೆಪಿ ಸರ್ಕಾರದ ಮೂರು ವರ್ಷ ಮತ್ತು ಬಸವರಾಜು ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷವಾಗಿರುವ ಹಿನ್ನೆಲೆಯಲ್ಲಿ ಜನೋತ್ಸವ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿ ಬಳಿ ಆಯೋಜಿಸಲಾಗಿದೆ.

ಜುಲೈ 28 ರಂದು ನಡೆಯಬೇಕಿದ್ದ ಕಾರ್ಯಕ್ರಮ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಮುಂದೂಡಿಕೆಯಾಗಿತ್ತು. ಆಗಸ್ಟ್ 28 ರಂದು ಗಣೇಶೋತ್ಸವ ಹಿನ್ನೆಲೆ ಮತ್ತೆ ಮುಂದೂಡಲಾಗಿದೆ. ಮೂರನೇ ಬಾರಿ ಸೆಪ್ಟೆಂಬರ್ 8ರಂದು ಆಯೋಜನೆಗೆ ನಿರ್ಧರಿಸಲಾಗಿತ್ತು. ಸಚಿವ ಉಮೇಶ್ ಕತ್ತಿ ನಿಧನದ ಕಾರಣ ಮತ್ತೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಹೀಗೆ ಪದೇ ಪದೇ ಕಾರ್ಯಕ್ರಮ ಮುಂದೂಡಿಕೆಯಾಗುತ್ತಿದ್ದುದ್ದು ಸರ್ಕಾರಕ್ಕೆ ಮುಜುಗರ ತಂದಿತ್ತು.

ಇದೀಗ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೇ ಸುಸೂತ್ರವಾಗಿ ನಡೆಯಲಿ ಎಂದು ಪ್ರಾರ್ಥಿಸಿ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಗಣ ಹೋಮ ಹಾಗೂ ವಿಷ್ಣು ಹೋಮ ಮಾಡಲಾಗಿದೆ.

ಹತ್ತು ಮಂದಿ ಆಗಮಿಕರ ನೇತೃತ್ವದಲ್ಲಿ ಹೋಮ ಹವನ ಜರುಗಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ರೇಷ್ಮೆ ಮಾರಾಟ‌ ಮಂಡಳಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಹಿಂದಿನ ಲೇಖನಮುಳುಗಿದ ಮನೆಗೆ ತಲಾ 5 ಲಕ್ಷ ಪರಿಹಾರ ನೀಡಿ: ಸರ್ಕಾರಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯ
ಮುಂದಿನ ಲೇಖನಪೋಕ್ಸೊ ಪ್ರಕರಣ: ಪಕ್ಷಕಾರರ ಸಂಧಾನ ಪರಿಗಣಿಸಿ ಆರೋಪಿ ಬಾಲಕನ ವಿರುದ್ಧದ ಪ್ರಕರಣ ವಜಾ ಮಾಡಿದ ಹೈಕೋರ್ಟ್