ಮನೆ ರಾಜಕೀಯ ಬಿಜೆಪಿ– ಜೆಡಿಎಸ್‌ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಬೇಕಾಗುತ್ತದೆ: ಜಿ.ಪರಮೇಶ್ವರ್‌

ಬಿಜೆಪಿ– ಜೆಡಿಎಸ್‌ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಬೇಕಾಗುತ್ತದೆ: ಜಿ.ಪರಮೇಶ್ವರ್‌

0

ಹುಬ್ಬಳ್ಳಿ: ಬಿಜೆಪಿ– ಜೆಡಿಎಸ್‌ ಒಂದಿಲ್ಲ, ಒಂದು ದಿನ ಬೇರೆ ಬೇರೆ ಆಗುತ್ತಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಬೇಕಾಗುತ್ತದೆ  ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

Join Our Whatsapp Group

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎರಡೂ ಪಕ್ಷದವರು ಸ್ವಲ್ಪದಿನ ಒಟ್ಟಿಗೆ ಇರಬಹುದು. ಆ ನಂತರ ಬೇರೆ ಆಗುತ್ತಾರೆ. ಜೆಡಿಎಸ್‌ನವರು ಹಿಂದೆ ನಮ್ಮ ಜೊತೆ ಸೇರಿದ್ದರು. ಸರ್ಕಾರವನ್ನೂ ರಚಿಸಿದ್ದರು. ಕೆಲದಿನಗಳ ನಂತರ ನಮ್ಮನ್ನು ಬಿಟ್ಟುಹೋದರು. ಅದೇ ರೀತಿ ಈ ಸಲವೂ ಆಗುತ್ತದೆ  ಎಂದು ಹೇಳಿದರು.

ಮುಡಾ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಏನೂ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ, ಜೆಡಿಎಸ್‌ನ ಕೆಲವರಿಗೆ ಅರ್ಥವಾಗಿದೆ. ಆದರೆ, ಕೆಲವರಿಗೆ ಅರ್ಥವಾಗಿಲ್ಲ. ಪ್ರತಿಭಟನೆ ನಡೆಸಿದ್ದಾರೆ ಎಂದರು.