ಚಂಡೀಗಢ: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಯೊಬ್ಬನನ್ನು ಸಿಬಿಐ ಶನಿವಾರ ಬಂಧಿಸಿದ್ದು, ಇಡಿ ಸಹಾಯಕ ನಿರ್ದೇಶಕರ ಸಂಪರ್ಕ ಇರುವ ಆರೋಪ ಕೇಳಿಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ರವಿವಾರ (ಡಿ22) ಟ್ರ್ಯಾಪ್ ಕಾರ್ಯಾಚರಣೆಯ ಸಂದರ್ಭದಲ್ಲಿ ಅಧಿಕಾರಿಯು ಕೇಂದ್ರೀಯ ತನಿಖಾ ದಳಕ್ಕೆ ಸ್ಲಿಪ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಇನ್ನೂ ತನಿಖೆಗೆ ಸೇರಿಲ್ಲ, ಆದರೆ ಅವರ ಸಹೋದರನನ್ನು ಫೆಡರಲ್ ಏಜೆನ್ಸಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ಶನಿವಾರ(ಡಿ28) ಮಧ್ಯವರ್ತಿ ನೀರಜ್ ಎಂಬಾತನನ್ನು ಬಂಧಿಸಿ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಒಂದು ದಿನದ ಕಾಲ ಏಜೆನ್ಸಿಯ ಕಸ್ಟಡಿಗೆ ಕಳುಹಿಸಿದೆ.
ಶಿಮ್ಲಾದಲ್ಲಿ ನಿಯೋಜಿತವಾಗಿರುವ ಇಡಿ ಸಹಾಯಕ ನಿರ್ದೇಶಕ ಮತ್ತು ದೆಹಲಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ವ್ಯಕ್ತಿ ಚಂಡೀಗಢದ ಬಳಿ ಉದ್ಯಮಿಯೊಬ್ಬರಿಂದ ಲಂಚದ ಹಣವನ್ನು ಸ್ವೀಕರಿಸಲು ಹೋಗಿದ್ದರು ಎಂದು ಆರೋಪಿಸಲಾಗಿದೆ, ಅವರು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.














