ಮನೆ ರಾಜ್ಯ ಭಿನ್ನಮತ ಶಮನ ಮಾಡಲು ಬಿವೈ ವಿಜಯೇಂದ್ರ ಕಸರತ್ತು: ರಮೇಶ್ ಜಾರಕಿಹೊಳಿ ಭೇಟಿ

ಭಿನ್ನಮತ ಶಮನ ಮಾಡಲು ಬಿವೈ ವಿಜಯೇಂದ್ರ ಕಸರತ್ತು: ರಮೇಶ್ ಜಾರಕಿಹೊಳಿ ಭೇಟಿ

0

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡಲು ಬಿ ವೈ ವಿಜಯೇಂದ್ರ ಕಸರತ್ತು ನಡೆಸುತ್ತಿದ್ದು ಈ ನಡುವೆ ಇಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ್ ಜಾರಕಿಹೊಳಿಯನ್ನ ಭೇಟಿಯಾಗಿದ್ದಾರೆ.

ಬೆಂಗಳೂರಿನ ನಿವಾಸದಲ್ಲಿ ರಮೇಶ್ ಜಾರಕಿಹೊಳಿಯನ್ನ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತುಕತೆ ನಡೆಸಿದರು. ಬಳಿಕ ಇಬ್ಬರು ನಾಯಕರು ಜೊತೆಗೆ ಕುಳಿತು ಉಪಹಾರ ಸೇವಿಸಿದರು.

ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ ವೈ ವಿಜಯೇಂದ್ರ, ಅಸಮಾಧಾನಿತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವೆ ಸೋಮಣ್ಣ,  ಲಿಂಬಾವಳಿ,  ಬೆಲ್ಲದ್,  ಯತ್ನಾಳ್ ಎಲ್ಲರನ್ನೂ ಜತೆಗೆ ಕರೆದೊಯ್ಯುವೆ. ಹಿರಿಯರ ಮಾತು ಸಲಹೆಗಳನ್ನ ಸ್ವೀಕರಿಸುವೆ ಎಂದು ತಿಳಿಸಿದರು.

ಹಿಂದಿನ ಲೇಖನನ್ಯಾಯಾಧೀಶರ ಹುದ್ದೆ: ಪ್ರಕರಣಗಳ ಮಾಹಿತಿ ಬಚ್ಚಿಟ್ಟಿದ್ದ ವಕೀಲರ ವಿರುದ್ಧದ ಆರೋಪ ಪಟ್ಟಿ ರದ್ದಿಗೆ ಹೈಕೋರ್ಟ್‌ ನಕಾರ
ಮುಂದಿನ ಲೇಖನಕಾಂತರಾಜು ವರದಿ ನೈಜತೆ ಬಗ್ಗೆ ಅನುಮಾನಗಳಿವೆ: ಆರ್ ಅಶೋಕ್ ಆರೋಪ