ಮನೆ ಸಾಹಿತ್ಯ ಕರ್ಣಾಟಕ ಸಂಗೀತ ಗಾಯಕ ಟಿ.ವಿ ಶಂಕರನಾರಾಯಣನ್‌ ನಿಧನ

ಕರ್ಣಾಟಕ ಸಂಗೀತ ಗಾಯಕ ಟಿ.ವಿ ಶಂಕರನಾರಾಯಣನ್‌ ನಿಧನ

0

ಚೆನ್ನೈ(Chennai): ಕರ್ಣಾಟಕ ಸಂಗೀತ ಗಾಯಕ ಟಿ.ವಿ ಶಂಕರನಾರಾಯಣನ್‌ ಅವರು ಶುಕ್ರವಾರ ಸಂಜೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಅವರಿಗೆ 77 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ ಮತ್ತು ಮಗಳನ್ನು ಅವರು ಅಗಲಿದ್ದಾರೆ. ಕರ್ಣಾಟಕ ಸಂಗೀತದ ಮೇರು ಶಿಖರ ಎನಿಸಿದ್ದ ಮಧುರೈ ಮಣಿ ಅಯ್ಯರ್ ಶೈಲಿಯಲ್ಲಿ ಹಾಡುತ್ತಿದ್ದ ಟಿ.ವಿ.ಶಂಕರನಾರಾಯಣನ್ ಅವರು 2003 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ವೆಂಬು ಅಯ್ಯರ್‌ ಅವರ ಮಗನಾದ ಶಂಕರನಾರಾಯಣನ್ ಅವರು ಮಣಿ ಅಯ್ಯರ್ ಅವರ ಸೋದರ ಸಂಬಂಧಿಯಾಗಿದ್ದಾರೆ. ಪದ್ಮಭೂಷಣ ಪ್ರಶಸ್ತಿ, ಸಂಗೀತ ಕಲಾನಿಧಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಟಿ. ವಿ. ಶಂಕರನಾರಾಯಣನ್ ಅವರಿಗೆ ಸಂದಿದೆ.

ಹಿಂದಿನ ಲೇಖನಅಹವಾಲು ಹೇಳಲು ಬಂದ ಮಹಿಳೆಯನ್ನು ನಿಂದಿಸಿದ ಶಾಸಕ ಅರವಿಂದ ಲಿಂಬಾವಳಿ
ಮುಂದಿನ ಲೇಖನಲೈಂಗಿಕ ದೌರ್ಜನ್ಯ ಪ್ರಕರಣ: ಡಿವೈಎಸ್’ಪಿ ಕಚೇರಿಯಲ್ಲಿ ಮುರುಘಾ ಶರಣರ ವಿಚಾರಣೆ