ಮನೆ ರಾಜ್ಯ ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸ್ಥಿತಿಯಲ್ಲಿ ನಿಂತ ಈಚರ್ ವ್ಯಾನ್

ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸ್ಥಿತಿಯಲ್ಲಿ ನಿಂತ ಈಚರ್ ವ್ಯಾನ್

0

ಚಾಮರಾಜನಗರ : ಮಹಾರಾಷ್ಟ್ರದ ಪುಣೆಯಿಂದ ಕೊಯಮತ್ತೂರಿಗೆ ಪಿವಿಸಿ ಪೈಪ್ ತುಂಬಿದ ಈಚರ್ ವ್ಯಾನ್ ಬೆಳಿಗ್ಗೆ ಕರ್ನಾಟಕ ತಮಿಳುನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಿಂಬಂ ಘಾಟ್ ನ ತೀವ್ರವಾದ ತಿರುವುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸ್ಥಿತಿಯಲ್ಲಿ ನಿಂತ ಘಟನೆ ನಡೆದಿದೆ.

Join Our Whatsapp Group

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ದಿಂಬಂ ಘಾಟ್ ಮೂಲಕ  ಮಹಾರಾಷ್ಟ್ರದ ಪುಣೆಯಿಂದ ಕೊಯಮತ್ತೂರಿಗೆ ಪಿವಿಸಿ ಪೈಪ್ ತುಂಬಿದ ಈಚರ್ ತೆರಳುವಾಗ ದಿಂಬಂ ಘಾಟ್ ನ   ಒಂಬತ್ತನೇ ತೀವ್ರವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಘಟನೆ ನಡೆದಿದೆ.

ಈಚರ್ ವಾಹನ ದಿಂಬಂನ  ತಡೆಗೋಡೆಗೆ ಹೊಡೆದು ಬೀಳುವ ಸ್ಥಿತಿಗೆ ಬಂದು ನಿಂತಿತು. ಈ ಘಟನೆಯಿಂದ ನಾಲ್ಕು ಗಂಟೆಗಳ ಕಾಲ ಎರಡೂ ರಾಜ್ಯಗಳ ನಡುವೆ ವಾಹನ ಸಂಚಾರ ಸ್ಥಗಿತಗೊಂಡಿತು.

ಈ ಘಟನೆಯಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ತಮಿಳುನಾಡಿನ ಪೊಲೀಸರು ಕ್ರೇನ್ ಮೂಲಕ ಈಚರ್ ವಾಹವನ್ನು ಹೊರ ತೆಗೆದ ಬಳಿಕ ಸಂಚಾರ ಎಂದಿನಂತೆ ಸಾಗಿತು.

ಹಿಂದಿನ ಲೇಖನಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವವರು ವೃತ್ತಿಪರ ಮಾನದಂಡ ಪಾಲಿಸಬೇಕು: ಹೈಕೋರ್ಟ್‌
ಮುಂದಿನ ಲೇಖನ96ನೇ ಆಸ್ಕರ್‌ ಅವಾರ್ಡ್ಸ್‌ ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಮಲಯಾಳಂನ “2018”