ಮನೆ ಅಪರಾಧ ಚಾಮರಾಜಪೇಟೆಯ ಹತ್ಯೆ ಪ್ರಕರಣ: ಕೆಲಸಗಾರನ ಮೇಲೆ ಅನುಮಾನ ?

ಚಾಮರಾಜಪೇಟೆಯ ಹತ್ಯೆ ಪ್ರಕರಣ: ಕೆಲಸಗಾರನ ಮೇಲೆ ಅನುಮಾನ ?

0

ಬೆಂಗಳೂರು(Bengaluru): ತಡರಾತ್ರಿ 80 ವರ್ಷದ ಜಿಗುರಾಜ್ ಎಂಬುವರನ್ನು ಕೈ-ಕಾಲು ಕಟ್ಟಿ, ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆಯ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ.

ಜಿಗುರಾಜ್​ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಜೋರಾಮ್ ಎಂಬಾತನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಮಾಡಿ ಮನೆಯಲ್ಲಿದ್ದ ಹಣ ಮತ್ತು ಚಿನ್ನಾಭರಣ ದೋಚಿ ಕೆಲಸಗಾರ ಪರಾರಿಯಾಗಿದ್ದಾನೆ.

ತಡರಾತ್ರಿ 11:30ಕ್ಕೆ ಘಟನೆ ನಡೆದಿರುವ ಸಾಧ್ಯತೆಯಿದೆ‌.‌ ನಿನ್ನೆ ರಾತ್ರಿ 12 ಗಂಟೆಗೆ ಸರ್ವೆಂಟ್ ಅಪಾರ್ಟ್​ಮೆಂಟ್​ನಿಂದ ಹೊರ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಿಗುರಾಜ್ ದಶಕಗಳಿಂದ ಮಾರ್ಕೆಟ್​ನಲ್ಲಿ ಹೋಲ್‌ಸೆಲ್ ಎಲೆಕ್ಟ್ರಾನಿಕ್ ಶಾಪ್ ಇಟ್ಟುಕೊಂಡಿದ್ದರು. ಮಕ್ಕಳು ಮನೆಯಿಂದ ಹೊರ ಹೋಗಿದ್ದ ವೇಳೆ ಹಂತಕ ಈ ಕೃತ್ಯವೆಸಗಿದ್ದಾನೆ.

ಬುಧವಾರ ಬೆಳಗ್ಗೆ ಮೊಮ್ಮಗ ಶಾಪ್ ಒಪನ್​ಗೆ ಕೀ ಪಡೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ಪ್ರಕರಣ ದಾಖಲಾಗ್ತಿದ್ದಂತೆ ಸ್ಥಳಕ್ಕೆ ಹಿರಿಯ ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.

ಈಗಾಗಲೇ ಮೂರು ತಂಡಗಳನ್ನು ರಚನೆ ಮಾಡಿದ್ದು, ಹಂತಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಹಿಂದಿನ ಲೇಖನಪಠ್ಯಪುಸ್ತಕ ಪರಿಷ್ಕರಣೆ: ಶಿಕ್ಷಣ ಇಲಾಖೆಯಲ್ಲಿ ಕೇಸರಿಕರಣಕ್ಕೆ ಬಿಜೆಪಿ ಪ್ರಯತ್ನ- ಆರ್.ಧೃವನಾರಾಯಣ್
ಮುಂದಿನ ಲೇಖನರೈತ ಸಂಘ ಬೆಂಬಲಿತ ಪ್ರಸನ್ನ ನಾಮಪತ್ರ ಸಲ್ಲಿಕೆಗೆ ಜನರಿಂದಲೇ ಠೇವಣಿ ಹಣ ಸಂಗ್ರಹ