ಮೈಸೂರು: ಮೈಸೂರಿನ ಆರ್ ಟಿಓ ಹಗರಣಗಳು ಬಗೆದಷ್ಟು ಬಯಲಾಗುತ್ತಿದ್ದು, ಪೂರ್ವ ಆರ್ ಟಿಓ ಅಧಿಕಾರಿಗಳು ಮಾಲೀಕರ ಗಮನಕ್ಕೆ ಬಾರದೇ ವಾಹನದ ಮಾಲೀಕತ್ವ ಬದಲಾವಣೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ಮಂಗಳವಾರ ‘ಸವಾಲ್ ಟಿವಿಯಲ್ಲಿ’ ಪೂರ್ವ ಆರ್ ಟಿಓ ಕಚೇರಿಯ ಭ್ರಷ್ಟಾಚಾರ ಕುರಿತ ವರದಿ ಪ್ರಕಟವಾದ ಬೆನ್ನಲ್ಲೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಸಿದ್ಧಾರ್ಥ ನಗರ ನಿವಾಸಿ ಶಿವಪ್ರಸಾದ್ .ಎಸ್ ಎಂಬುವವರ ವಾಹನ ಸಂಖ್ಯೆ ಕೆಎ55 ಹೆಚ್ 8174 ಆ್ಯಕ್ಸೆಸ್ ಯು2125 ವಾಹನವನ್ನು 2010ರ ಮಾರ್ಚ್ 5 ರಂದು ಖರೀದಿಸಿದ್ದು, 2023ರ ಫೆಬ್ರವರಿ 13 ರಂದು B- extract ತೆಗೆಸಿದಾಗ ಅದರಲ್ಲಿ ಅಬ್ದುಲ್ ರಹೀಮ್ ಎಂಬುವವರು ಹೆಸರು ಮತ್ತು ವಿಳಾಸ ಕಂಡುಬಂದಿದ್ದು, ವಾಹನ ಮಾಲೀಕತ್ವ ಬದಲಾಗಿರುವುದು ತಿಳಿದುಬಂದಿದೆ.
ಆದರೆ ಶಿವಪ್ರಸಾದ್ .ಎಸ್ ವಾಹನವನ್ನು ಯಾರಿಗೂ ಮಾರಾಟ ಮಾಡಿಲ್ಲ. ಮಾತ್ರವಲ್ಲದೇ ಅವರ ಬಳಿಯೇ ವಾಹನ ಹಾಗೂ ದಾಖಲಾತಿಗಳು ಇದೆ. ಈ ಸಂಬಂಧ ಆರ್ ಟಿಓ ಕಚೇರಿಗೆ ಹೋಗಿ ದೂರು ನೀಡಿದರೂ ಸ್ಪಂದಿಸಿಲ್ಲ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ನ್ಯಾಯದೊರಕಿಸಿಕೊಡಬೇಕೆಂದು ವಾಹನದ ಮಾಲೀಕ ಶಿವಪ್ರಸಾದ್ .ಎಸ್ ಒತ್ತಾಯಿಸಿದ್ದಾರೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.