ಮನೆ ವ್ಯಕ್ತಿತ್ವ ವಿಕಸನ ಮಕ್ಕಳು ಚುರುಕಾಗಿರಬಲ್ಲರು

ಮಕ್ಕಳು ಚುರುಕಾಗಿರಬಲ್ಲರು

0

      ಒಬ್ಬ ಹೆಂಗಸು ಧಾರ್ಮಿಕ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ತನ್ನ ಮನೆಯಲ್ಲಿ ಬಹಳಷ್ಟು ಲಾಡುಗಳು ಮಾಡಿದ್ದಳು.ಅವಳ ಮಗ ಯಾವಾಗಲೂ ಅಡುಗೆ ಮನೆಯಿಂದ ಸಿಹಿತಿಂಡಿಗಳನ್ನು ಕದಿಯುವ ಅಭ್ಯಾಸ ಮಾಡಿಕೊಂಡಿದ್ದನ್ನು. ಆ ದಿನ ಅವಳು ಅವನು ತಿಂಡಿ ಕದಿಯುವಾಗ ಹಿಡಿದುಬಿಟ್ಟಳು. ಅವನನ್ನು ದೇವರ ವಿಗ್ರಹವೀರುವ ಕಡೆಗೆ ಕರೆದೊಯ್ದು ಹೀಗೆಂದು ಪ್ರಶ್ನಿಸಿದಳು. “ನೀನು ಲಾಡು ಕದಿಯುವಾಗ ದೇವರು ನೋಡುತ್ತಿದ್ದರೆಂದು ನಿನಗೆ ಗೊತ್ತೇ?”

Join Our Whatsapp Group

 “ಹೌದು” ಎಂದು ಹುಡುಗ ಉತ್ತರಿಸಿದನು.

 “ಆಗ ಅವನು ನಿನ್ನನ್ನೇ ನೋಡುತ್ತಿದ್ದೆನೆದು ಗೊತ್ತೇ?”

 “ಹೌದು” ಮತ್ತೆ ಹುಡುಗ ಉತ್ತರಿಸಿದನು.

 “ನಿನಗೆ ಅವನು ಏನು ಹೇಳುತ್ತಿದ್ದನೆಂದು ಅಂದುಕೊಂಡಿರುವೆ? ”

 ಅವನು ನೀಡಿದ ಉತ್ತರವು ತಾಯಿಯನ್ನು ದಿರ್ಗ್ಬಾಂತಳನ್ನಾಗಿ   ಮಾಡಿತು. *

ಪ್ರಶ್ನೆಗಳು

1. ಹುಡುಗನ ಉತ್ತರವೇನಾಗಿತ್ತು?

2. ಈ ಕಥೆಯ ನೀತಿಯೇನು?

ಉತ್ತರಗಳು

 1. “ನಾಮ್ಮಿಬ್ಬರನ್ನು ಬಿಟ್ಟರೆ ಇನ್ಯಾರು ಇಲ್ಲ, ಲಾಡು ತಿನ್ನು ಎಂದು ದೇವರು ಹೇಳಿದ ”ಎಂದು ಹುಡುಗನು ಹೇಳಿದನು.

2.ಇಲ್ಲಿ  ಹಾಸ್ಯಪ್ರಜ್ಞೆಯನ್ನು ನೀವು ಇಷ್ಟಪಡಬಹುದು.ಆದರೆ ಇಲ್ಲಿ ನಾವು ದೇವರನ್ನು ನೋಡಿಲ್ಲವೆಂಬ ಗಾಢ ಸತ್ಯ ಅಡಕವಾಗಿದೆ. ಇದು ನಮ್ಮ ಮನಸ್ಸಿನ ಪರಿಕಲ್ಪನೆಯಷ್ಟೇ ಮಕ್ಕಳು ತಮಗೇನು ಕಾಣಿಸುತ್ತದೆ ಮತ್ತು ಕೇಳುತ್ತದೆ ಅದನ್ನು ಮಾತ್ರ ನಂಬುತ್ತಾರೆ.ಅವರು ಪ್ರತ್ಯಕ್ಷವಾಗಿ ಇರುವುದನ್ನು ಬಿಟ್ಟು ಇನ್ನೇನನ್ನೂ ಅರಿಯಲಾರರು.ದೇವರ ಬಗ್ಗೆ ಹೇಳುವುದೂ ಕೂಡ ಅವರಿಗೆ ಇಂತಹದೇ ಕಾರಣಗಳಿಗೆ ರಾಕ್ಷಸರ ಬಗ್ಗೆ ಹೇಳುವುದು,ಅದನ್ನು ಮಾಡಬಾರದು ಎಂದು ಹೆದರಿಸುವುದಕ್ಕೆ ಸಮಾನವಾಗಿರುತ್ತದೆ. ಅರ್ಥಮಾಡಿಕೊಳ್ಳಲಾಗದಷ್ಟು ಚಿಕ್ಕವರಿದ್ದಾಗ ಮಕ್ಕಳಿಗೆ ದೇವರು ಮತ್ತು ರಾಕ್ಷಸರ ಬಗ್ಗೆ ಹೇಳದಿರುವುದು ಉತ್ತಮ.

ಹಿಂದಿನ ಲೇಖನವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಮಕ್ಕಳು ಮೌಡ್ಯದಿಂದ ಹೊರಗೆ ಬರಬೇಕು: ಸಿಎಂ ಸಿದ್ದರಾಮಯ್ಯ ಕರೆ
ಮುಂದಿನ ಲೇಖನರೇಣುಕಾಸ್ವಾಮಿ ಕೊಲೆ ಪ್ರಕರಣ: ಎಸ್.ಪಿ ಪಿ ಬದಲಾವಣೆ ಬಗ್ಗೆ ಯಾರ ಒತ್ತಡವೂ ಇಲ್ಲ, ಒತ್ತಡ ಹಾಕಿದರೆ ಕೇಳುವುದೂ ಇಲ್ಲ- ಮುಖ್ಯಮಂತ್ರಿ ಸಿದ್ದರಾಮಯ್ಯ