ಮೈಸೂರು : ನಗರದ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನ ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್ನಲ್ಲಿ ಉಪಹಾರ ಸೇವಿಸಿದರು.
ಮೈಲಾರಿ ಹೋಟೆಲ್ನಲ್ಲಿ ಸಿಎಂ ದೋಸೆ, ಇಡ್ಲಿ ಸವಿದರು. ಸಿದ್ದರಾಮಯ್ಯಗೆ ಸಚಿವ ಕೆ.ವೆಂಕಟೇಶ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಐಜಿಪಿ ಬೋರಲಿಂಗಯ್ಯ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸಾಥ್ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಮೈಲಾರಿ ಹೋಟೆಲ್ನ ದೋಸೆ ಬಹಳ ಅಚ್ಚುಮೆಚ್ಚು. ನಗರಕ್ಕೆ ಭೇಟಿ ಕೊಟ್ಟಾಗ ಸಾಮಾನ್ಯವಾಗಿ ಅವರು ಈ ಹೋಟೆಲ್ಗೆ ತೆರಳಿ ದೋಸೆ ಸವಿಯುತ್ತಾರೆ.
ವಿಧಾನಸಭಾ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿಯವರು ಮೈಸೂರಿಗೆ ಭೇಟಿ ಕೊಟ್ಟಾಗ ಮೈಲಾರಿ ಹೋಟೆಲ್ನ ದೋಸೆ ಸವಿದಿದ್ದರು. ಅವರೇ ಅಡುಗೆ ಮನೆಯಲ್ಲಿ ತವಾ ಮೇಲೆ ದೋಸೆ ಹಾಕಿ, ಬಳಿಕ ದೋಸೆ ಸವಿದು ರುಚಿಗೆ ಮನಸೋತಿದ್ದರು.















