ಮನೆ ಆರೋಗ್ಯ ಸಿಎಂಗೆ ಕೋವಿಡ್ ದೃಢ:  ದೆಹಲಿ ಪ್ರವಾಸ ರದ್ದು

ಸಿಎಂಗೆ ಕೋವಿಡ್ ದೃಢ:  ದೆಹಲಿ ಪ್ರವಾಸ ರದ್ದು

0

ಬೆಂಗಳೂರು(Bengaluru): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಕೋವಿಡ್–19 ದೃಢಪಟ್ಟಿದ್ದು, ಅವರ ದೆಹಲಿ ಪ್ರವಾಸ ರದ್ದಾಗಿದೆ.

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, ನನಗೆ ಇಂದು ಕೋವಿಡ್-19 ದೃಢಪಟ್ಟಿದ್ದು, ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿವೆ. ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ನನ್ನ ದೆಹಲಿಯ ಪ್ರವಾಸ ರದ್ದಾಗಿರುತ್ತದೆ ಎಂದು ತಿಳಿಸಿದ್ದಾರೆ.

ಆಜಾದಿ ಕಾ ಅಮೃತ್‌ ಮಹೋತ್ಸವದ ರಾಷ್ಟ್ರೀಯ ಸಮಿತಿಯ 3ನೇ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಅವರು ಶನಿವಾರ ದೆಹಲಿಗೆ ತೆರಳಬೇಕಿತ್ತು.

ಹಿಂದಿನ ಲೇಖನದಸರಾ ಮಹೋತ್ಸವ: ಅರಣ್ಯ ಇಲಾಖೆಯಿಂದ ಆನೆಗಳ ಪಟ್ಟಿ ಬಿಡುಗಡೆ
ಮುಂದಿನ ಲೇಖನಇಂದು ಉಪ ರಾಷ್ಟ್ರಪತಿ ಚುನಾವಣೆ: ಸಂಜೆ ವೇಳೆಗೆ ಫಲಿತಾಂಶ