ಮನೆ ರಾಷ್ಟ್ರೀಯ ರಾಮೋಜಿ ರಾವ್​ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಸಿನಿ ಗಣ್ಯರಿಂದ ಸಂತಾಪ

ರಾಮೋಜಿ ರಾವ್​ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಸಿನಿ ಗಣ್ಯರಿಂದ ಸಂತಾಪ

0

ಹೈದರಾಬಾದ್​: ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ರಾಮೋಜಿ ರಾವ್​ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿರುವ ರಾಮೋಜಿ ರಾವ್​ ಇಹಲೋಕ ತ್ಯಜಿಸಿದ್ದು, ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಭಾರತೀಯ ಮಾಧ್ಯಮದಲ್ಲಿ ಕ್ರಾಂತಿ ಮಾಡಿದ ರಾಮೋಜಿರಾವ್​ ಅವರ ನಿಧನ ತೀವ್ರ ದುಃಖ ತಂದಿದೆ. ಪತ್ರಿಕೋದ್ಯಮ ಮತ್ತು ಚಿತ್ರರಂಗದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾರೆ. ಅವರ ಅವಿರತ ಪ್ರಯತ್ನಗಳ ಫಲವಾಗಿ ಮಾಧ್ಯಮ ಮತ್ತು ಮನೋರಂಜನಾ ಜಗತ್ತಿನಲ್ಲಿ ಹೊಸ ನಾವೀನ್ಯತೆಯನ್ನು ಸೃಷ್ಟಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಂತಾಪ ವ್ಯಕ್ತಪಡಿಸಿದ ಚಂದ್ರಬಾಬು ನಾಯ್ಡು: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿರುವ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್​ ಚಂದ್ರಬಾಬು ನಾಯ್ಡು ಕೂಡ ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಅದ್ಬುತ ಸಾಧನೆಗಳನ್ನು ಮಾಡಿದ್ದಾರೆ. ಎರಡು ತೆಲುಗು ರಾಜ್ಯಗಳು ಸೇರಿದಂತೆ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ರಾಮೋಜಿ ರಾವ್​ ಅವರ ಸಾವು ಕೇವಲ ತೆಲುಗು ಜನರಿಗೆ ಆದ ನಷ್ಟವಲ್ಲ, ಇಡೀ ದೇಶಕ್ಕಾದ ನಷ್ಟ. ಇದೇ ವೇಳೆ, ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿರುವ ಅವರು, ಸತ್ಯ ಮತ್ತು ತಮ್ಮ ಮೌಲ್ಯಗಳಿಗಾಗಿ ಧೈರ್ಯದಿಂದ ಹೋರಾಡಿದ ಛಲಗಾರ ಎಂದು ಬಣ್ಣಿಸಿದ್ದಾರೆ.

ತೆಲುಗು ನಟ – ನಟಿಯರಿಂದ ಸಂತಾಪ: ಪ್ರಧಾನಿ ಹೊರತಾಗಿ ಅನೇಕ ತೆಲುಗು ಅಭಿಮಾನಿಗಳು, ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ನಟ ಚಿರಂಜೀವಿ ಕೂಡ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ರಾಮೋಜಿ ರಾವ್​ ನಿರ್ಮಾಣದಲ್ಲಿ ನಿನ್ನು ಚೂಡಾಲನಿ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ನಟ ಜೂ ಎನ್​ಟಿಆರ್​ ಕೂಡ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಹಿಂದಿನ ಲೇಖನಗೆಳೆಯನ ಮೇಲೆ ಹಲ್ಲೆ ಪ್ರಕರಣ: 7 ಮಂದಿಯ ಬಂಧನ
ಮುಂದಿನ ಲೇಖನನಿಯಂತ್ರಣ ತಪ್ಪಿ ರಸ್ತೆ ಬದಿ ಕಟ್ಟೆಗೆ ಬಿದ್ದ ಕಾರು: ನಾಲ್ವರಿಗೆ ಗಾಯ