ಮನೆ ಅಪರಾಧ ಲಂಚದ ಆರೋಪ: ಕಲಬುರ್ಗಿಯಲ್ಲಿ ಜೆಇ ಮತ್ತು ಪಿಡಿಒ ಅಮಾನತು

ಲಂಚದ ಆರೋಪ: ಕಲಬುರ್ಗಿಯಲ್ಲಿ ಜೆಇ ಮತ್ತು ಪಿಡಿಒ ಅಮಾನತು

0

ಕಲಬುರ್ಗಿ: ಜಿಲ್ಲೆಯಲ್ಲಿ ಕಾಮಗಾರಿಯೊಂದರ ಬಿಲ್ ಪಾಸ್ ಮಾಡೋದಕ್ಕೆ ಶೇ.5ರಷ್ಟು ಲಂಚ ನೀಡುವಂತೆ ಬಹಿರಂಗವಾಗಿಯೇ ಕೇಳಿದಂತ ಇಬ್ಬರನ್ನು ಅಮಾನತುಗೊಳಿಸಿ ಕಲಬುರ್ಗಿ ಜಿಲ್ಲಾ ಪಂಚಾಯ್ತಿ ಸಿಇಒ ಭಂವರ್ ಸಿಂಗ್ ಮೀನಾ ಆದೇಶಿಸಿದ್ದಾರೆ.

ಈ ಸಂಬಂಧ ಕಲಬುರ್ಗಿಯ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಿಧಿಕಾರಿ ಭಂವರ್ ಸಿಂಗ್ ಮೀನಾ ಆದೇಶಿಸಿದ್ದು, ಕಾಮಗಾರಿಯ ಬಿಲ್ ಗೆ 5 ಪರ್ಸೆಂಟ್ ಲಂಚ ಕೇಳಿದಂತ ಆರೋಪದಡಿ ಜೆಇ ಶ್ರೀಪಾದ್ ಕುಲಕರ್ಣಿ, ಪಿಡಿಒ ಮಂಜುಶ್ರೀ ಅವರನ್ನು ಅಮಾನತುಗೊಳಿಸಿದ್ದಾರೆ.

ಅಂದಹಾಗೇ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಲಂಚ ಕೇಳಿದಂತ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸೂಚಿಸಿದ್ದರು. ಈ ಸೂಚನೆಯ ಬೆನ್ನಲ್ಲೇ ಸಿಇಒ ಅವರು ಜೆಇ ಶ್ರೀಪಾದ್ ಕುಲಕರ್ಣಿ ಹಾಗೂ ಪಿಡಿಒ ಮಂಜುಶ್ರೀ ಅವರ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ, ಸಸ್ಪೆಂಡ್ ಮಾಡಲಾಗಿದೆ.