ಮನೆ ಅಪರಾಧ ಭಜರಂಗದಳ ಕಾರ್ಯಕರ್ತನ ರ್ಯಾಶ್ ಡ್ರೈವಿಂಗ್ ಗೆ ದಂಪತಿ ಬಲಿ

ಭಜರಂಗದಳ ಕಾರ್ಯಕರ್ತನ ರ್ಯಾಶ್ ಡ್ರೈವಿಂಗ್ ಗೆ ದಂಪತಿ ಬಲಿ

0

ತುಮಕೂರುತುಮಕೂರಿನ ಭಜರಂಗದಳ ಕಾರ್ಯಕರ್ತ ಮಂಜು ಭಾರ್ಗವ್ ರ್ಯಾಶ್ ಡ್ರೈವಿಂಗ್ ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿ ಬಲಿಯಾಗಿರುವ ಘಟನೆ ಶನಿವಾರ ಸಂಜೆ ತುಮಕೂರು ನಾಮದಚಿಲುಮೆ-ದೇವರಾಯನದುರ್ಗ ಅರಣ್ಯ ರಸ್ತೆಯ ಸಿದ್ದಗಂಗಾ ಕ್ರಾಸ್  ನಲ್ಲಿ ನಡೆದಿದೆ.

ಕಾರು ಓಡಿಸುತ್ತಿದ್ದ ಮಂಜು ಭಾರ್ಗವ್ ಅವರ ನಿರ್ಲಕ್ಷ್ಯದ ಚಾಲನೆಯಿಂದಾಗಿ ಇಬ್ಬರನ್ನು ಕೊಂದ ಕಾರಣ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ ಐಸಿ ಏಜೆಂಟ್  ನರಸಿಂಹರಾಜು (44), ಮತ್ತು  ಅವರ ಪತ್ನಿ ನಾಗರತ್ನ (40)  ಹುಟ್ಟೂರಾದ ಇರಕಸಂದ್ರ ಕಾಲೋನಿಯಿಂದ ತುಮಕೂರಿನ ತಮ್ಮ ನಿವಾಸಕ್ಕೆ ಮೋಟಾರ್‌ಬೈಕ್‌ನಲ್ಲಿ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿ ಮೃತ ಪಟ್ಟಿದ್ದಾರೆ.

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ, ಮಂಜು ಭಾರ್ಗವ್ ಮತ್ತೊಂದು ವ್ಯಾನ್‌ಗೆ ಕಾರಿನಲ್ಲಿ ಗುದ್ದಿದ್ದಾರೆ, ಅದರಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಭಾರ್ಗವ್ ಅವರ ಸ್ನೇಹಿತರು ಸ್ಥಳಕ್ಕೆ ಧಾವಿಸಿ ಸ್ಥಳೀಯ ನಿವಾಸಿಗಳು ಆತನ ಮೇಲೆ ಹಲ್ಲೆ ನಡೆಸದಂತೆ ತಡೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಕುಕ್ಕರಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ
ಮುಂದಿನ ಲೇಖನದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡಲು ಮಧ್ಯಪ್ರದೇಶ ಪೊಲೀಸರಿಗೆ ರಜೆ ಘೋಷಣೆ