ಹುಚ್ಚ’- ಸಿನಿಮಾ ಪ್ರೇಮಿಗಳ ಹೃದಯದಲ್ಲಿ ಈ ಚಿತ್ರಕ್ಕೊಂದು ವಿಶೇಷ ಸ್ಥಾನವಿದೆ. ಅದಕ್ಕೆ ಕಾರಣ ನಾಯಕ ಸುದೀಪ್ ಅವರ ನಟನೆ. ತಮ್ಮ ಅದ್ಭುತ ನಟನೆಯ ಮೂಲಕ “ಹುಚ್ಚ’ ಚಿತ್ರದಲ್ಲಿ ಮಿಂಚಿದ್ದರು ಸುದೀಪ್. ನಟನೆ, ಹಾಡು ಎಲ್ಲದರಲ್ಲೂ ಆ ಚಿತ್ರ ಫುಲ್ ಮಾರ್ಕ್ಸ್ ಪಡೆದುಕೊಂಡಿತ್ತು. ಸುದೀಪ್ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಕೂಡಾ ಹೌದು. ಅದೇ ಕಾರಣದಿಂದ ಸುದೀಪ್ ಅವರಿಗೂ ಆ ಚಿತ್ರದ ಮೇಲೆ ವಿಶೇಷ ಪ್ರೀತಿ ಇದೆ. ಈಗ ಯಾಕೆ ಈ ವಿಚಾರ ಎಂದು ಕೇಳಬಹುದು. ಅದಕ್ಕೆ ಕಾರಣ “ಹುಚ್ಚ’ ಮತ್ತೂಮ್ಮೆ ಪ್ರೇಕ್ಷಕರ ಎದುರು ಬರಲು ಸಿದ್ಧವಾಗಿದೆ. ಅದು ತಾಂತ್ರಿಕ ಶ್ರೀಮಂತಿಕೆಯೊಂದಿಗೆ.
“ಹುಚ್ಚ’ ಚಿತ್ರ ಮರುಬಿಡುಯಾಗುತ್ತದೆ. ಚಿತ್ರವನ್ನು ಮೂಲ ನಿರ್ಮಾಪಕರ ಅನುಮತಿ ಪಡೆದು ಎ.ಎಂ.ಎಸ್ ಬ್ಯಾನರ್ನ ನಿರ್ಮಾಪಕ ಎಸ್.ಡಿ. ಮುನಿಸ್ವಾಮಿ ಅವರು ಅಪ್ಪು ಆರ್ಟ್ಸ್ ಮೂಲಕ ರೀ ರಿಲೀಸ್ ಮಾಡುತ್ತಿದ್ದಾರೆ.
ಮುನಿಸ್ವಾಮಿ ಅವರು ಈಗಾಗಲೇ “ಕುಲ್ಫಿ’ ನಿರ್ಮಿಸಿದ್ದು, “ಲಂಕಾಸುರ’ ಚಿತ್ರದ ನಿರ್ಮಾಣದಲ್ಲೂ ತೊಡಗಿದ್ದರು. ನೆಗೆಟಿವ್ನಿಂದ ಡಿಜಿಟಲ್ ಫಾರ್ಮೆಟ್ಗೆ ಚಿತ್ರವನ್ನು ಬದಲಿಸಲಾಗಿದ್ದು, ಜೊತೆಗೆ ಎಫೆಕ್ಟ್ ಡಿಟಿಎಸ್, ಡಿಐ ಸೇರಿದಂತೆ ಇಡೀ ಸಿನಿಮಾವನ್ನು ತಾಂತ್ರಿಕವಾಗಿ ಅಪ್ಡೇಟ್ ಮಾಡಲಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಎಂಬ ವಿಶ್ವಾಸವಿದೆ.
“ಹುಚ್ಚ’ ಚಿತ್ರದ ಈ ಎಲ್ಲಾ ಕಾರ್ಯಗಳನ್ನು “ಲಂಕಾಸುರ’ ಚಿತ್ರದ ಸಹಾಯಕ ನಿರ್ದೇಶಕ ವಿಕ್ರಮ್ ಅವರು ನಿಂತು ಮಾಡಿಸಿದ್ದು, ಈ ತಿಂಗಳಾಂತ್ಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಮಧ್ಯ ಕೂಟನಡೆಸಿ ಕೃತಜ್ಞತೆ ಸಲ್ಲಿಸಿದ ಬಿಜೆಪಿ ಸಂಸದ ಕೆ ಸುಧಾಕರ್!
ಜೋಗದ ಗುಂಡಿಯಲ್ಲಿ ಧುಮ್ಮಕ್ಕುತ್ತಿದೆ ಜಲಧಾರೆ
ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಾಣಿಗಳಲ್ಲಿರುವ ಪ್ರೀತಿ ಮತ್ತು ಒಗ್ಗಟ್ಟುನು ಒಮ್ಮೆ ನೋಡಿ
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.