ಮನೆ ರಾಜಕೀಯ ಸಚಿವ ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಡಿಕೆಶಿ ಆಗ್ರಹ

ಸಚಿವ ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಡಿಕೆಶಿ ಆಗ್ರಹ

0

ಬೆಂಗಳೂರು(Bengaluru): ಪ್ರತ್ಯೇಕ ರಾಜ್ಯದ ವಿಚಾರದ ಬಗ್ಗೆ ಮಾತನಾಡಿರುವ ಸಚಿವ ಉಮೇಶ ಕತ್ತಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ  ಟ್ವೀಟ್‌ ಮಾಡಿರುವ ಅವರು, ಲೋಕಸಭಾ ಚುನಾವಣೆಯ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದಿರುವ ಸಚಿವ ಉಮೇಶ್ ಕತ್ತಿ ಅವರನ್ನು ಮುಖ್ಯಮಂತ್ರಿಗಳು ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವರು ಏಕೀಕೃತ ಕರ್ನಾಟಕದ ವಿರುದ್ಧ ಕತ್ತಿ ಬೀಸುತ್ತಲೇ ಇದ್ದರೂ ತುಟಿ ಬಿಚ್ಚದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ಇದೇ ನೆಲದ ನೀರು, ಅನ್ನ ಸೇವಿಸಿ ಈಗ ಇದೇ ನೆಲಕ್ಕೆ ಬಿಜೆಪಿ ನಾಯಕರು ದ್ರೋಹ ಬಗೆಯುತ್ತಿದ್ದಾರೆ. ತಾಯಿ ನೆಲವನ್ನು ಅವಮಾನಿಸುವುದು ಒಂದೇ, ಹೆತ್ತ ತಾಯಿಯನ್ನು ಅವಮಾನಿಸುವುದು ಒಂದೇ. ಉತ್ತರ ಕರ್ನಾಟಕ ಇಂದಿಗೂ ಎಂದಿಗೂ ಕರ್ನಾಟಕದ ಭಾಗವಾಗೇ ಉಳಿಯುತ್ತದೆ. ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ. ಇದು ಕಾಂಗ್ರೆಸ್ ಪ್ರತಿಜ್ಞೆ ಎಂದು ಡಿಕೆಶಿ ಹೇಳಿದ್ದಾರೆ.

ಹಿಂದಿನ ಲೇಖನಔಷಧಿ ಸಸ್ಯಗಳಿಂದ ಹೆಚ್ಚಿನ ಪ್ರಯೋಜನ: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮಾ
ಮುಂದಿನ ಲೇಖನಉದ್ದವ್ ಠಾಕ್ರೆ, ಸಂಜಯ್ ರಾವುತ್ ಗೆ ಮಂಪರು ಪರೀಕ್ಷೆ ನಡೆಸಿದರೆ ನಟ ಸುಶಾಂತ್ ಸಿಂಗ್ ಸಾವಿನ ರಹಸ್ಯ ಬಯಲು