ಮನೆ ಅಪರಾಧ ಅವಹೇಳನಕಾರಿ ಟ್ವೀಟ್: ನಟ ಚೇತನ್’ಗೆ 14 ದಿನ ನ್ಯಾಯಾಂಗ ಬಂಧನ

ಅವಹೇಳನಕಾರಿ ಟ್ವೀಟ್: ನಟ ಚೇತನ್’ಗೆ 14 ದಿನ ನ್ಯಾಯಾಂಗ ಬಂಧನ

0

ಬೆಂಗಳೂರು: ಧಾರ್ಮಿಕ ಭಾವನೆಗೆ ಧಕ್ಕೆ‌ ತರುವಂತಹ ಟ್ವೀಟ್ ಮಾಡಿದ ಆರೋಪದಡಿ ನಟ ಚೇತನ್ ಅವರನ್ನು‌ ಶೇಷಾದ್ರಿಪುರ ಪೊಲೀಸರು‌ ಮಂಗಳವಾರ ಬೆಳಿಗ್ಗೆ ಬಂಧಿಸಿದ್ದರು.

ಸದ್ಯ ಚೇತನ್ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿರುವ ನಗರದ 32ನೇ ಎಸಿಎಂಎಂ ಕೋರ್ಟ್ ಚೇತನ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಉರಿಗೌಡ–ನಂಜೇಗೌಡ ವಿಚಾರದಲ್ಲಿ ಹಿಂದೂ ಧರ್ಮದ ಬಗ್ಗೆ ನಟ ಚೇತನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂಬುದಾಗಿ ಶಿವಕುಮಾರ್ ಎಂಬುವವರು ದೂರು ನೀಡಿದ್ದರು. ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂದಿನ ಲೇಖನವಿ ಸೋಮಣ್ಣಗೆ ಚಾಮರಾಜನಗರ ಉಸ್ತುವಾರಿ ನೀಡಬಾರದು: ಅಯ್ಯನಪುರ ಶಿವಕುಮಾರ್
ಮುಂದಿನ ಲೇಖನಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನಿಂದ ಅನಾವಶ್ಯಕ ಗೊಂದಲ: ಸಿಎಂ ಬೊಮ್ಮಾಯಿ