ಮನೆ ರಾಜ್ಯ ದೇವನೂರು ಮಹಾದೇವ ಅವರ ಪಠ್ಯ ಕೈಬಿಡಲು ಆಗಲ್ಲ. ಮನವೊಲಿಕೆಗೆ ಯತ್ನ: ಬಿ.ಸಿ.ನಾಗೇಶ್

ದೇವನೂರು ಮಹಾದೇವ ಅವರ ಪಠ್ಯ ಕೈಬಿಡಲು ಆಗಲ್ಲ. ಮನವೊಲಿಕೆಗೆ ಯತ್ನ: ಬಿ.ಸಿ.ನಾಗೇಶ್

0

ಮೈಸೂರು(Mysuru): ಪಠ್ಯ ಪುಸ್ತಕದಲ್ಲಿ ತಮ್ಮ ಪಠ್ಯ ಕೈ ಬಿಡುವಂತೆ ಸಾಹಿತಿ ದೇವನೂರ ಮಹದೇವ ಅವರು ಪತ್ರ ಬರೆದು ಮನವಿ ಮಾಡಿರುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯಿಸಿ, ಈಗ ಪಠ್ಯ ಕೈಬಿಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಬಿ.ಸಿ ನಾಗೇಶ್, ದೇವನೂರು ಮಹದೇವ ಅವರು ಮೊದಲೇ ಹೇಳಿದ್ದರೇ ಚರ್ಚಿಸಬಹುದಿತ್ತು. ಈಗಾಗಲೇ ಪಠ್ಯ ಮುದ್ರಣವಾಗಿದೆ ಅದು ಮಕ್ಕಳ ಕೈ ಸೇರಲಿದೆ.  ಈ ಸಂದರ್ಭಧಲ್ಲಿ ಪಠ್ಯ ತೆಗೆಯಲು ಆಗಲ್ಲ ಇದನ್ನ ಮನವರಿಕೆ ಮಾಡುತ್ತೇವೆ. ದೇವನೂರ ಮಹದೇವ ಅವರಿಗೆ  ತಾತ್ವಿಕ ಭಿನ್ನತೆ ಇರಬಹುದು ನಮಗಿಲ್ಲ  ಇದನ್ನು ಮಾತನಾಡಿ ಬಗೆಹರಿಸುತ್ತೇವೆ ಎಂದರು.

ಮಹದೇವ ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ . ಹಿಂದಿನಿಂದಲೂ ಬ್ರಿಟೀಷರ ಪಠ್ಯವೇ ಇತ್ತು.  ನಾವು ಬಂದ ಮೇಲೆ ರಾಷ್ಟ್ರೀಯತೆ ಪಠ್ಯ ಸೇರಿಸಿದ್ದೇವೆ.  ಪರಿವರ್ತನೆ ಅನ್ನೋದು ಜಗದ ನಿಯಮ ಎಂದು ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.