ಮನೆ ಸ್ಥಳೀಯ ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್’ನ ವಿಶೇಷ ಚೇತನರ ಆಶ್ರಮ ಅಭಿವೃದ್ಧಿಗೊಳಿಸಿ: ಉಸ್ತುವಾರಿ ಸಚಿವರಲ್ಲಿ ಆರ್.ಶ್ರೀಪಾಲ್ ಮನವಿ

ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್’ನ ವಿಶೇಷ ಚೇತನರ ಆಶ್ರಮ ಅಭಿವೃದ್ಧಿಗೊಳಿಸಿ: ಉಸ್ತುವಾರಿ ಸಚಿವರಲ್ಲಿ ಆರ್.ಶ್ರೀಪಾಲ್ ಮನವಿ

0

ಮೈಸೂರು: ಶಿವರಾಂಪುರ ನಿರ್ಮಲ ಶಾಲೆ ಪಕ್ಕದಲ್ಲಿರುವ ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್’ನ ವಿಶೇಷ ಚೇತನರ ಆಶ್ರಮದ ಅಭಿವೃದ್ಧಿ ಉಸ್ತುವಾರಿ ಸಚಿವರು ಮುಂದಾಗಬೇಕೆಂದು ಕೆ.ಪಿ.ಸಿ.ಸಿ. ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾದ ಆರ್.ಶ್ರೀಪಾಲ್ ಒತ್ತಾಯಿಸಿದರು.

Join Our Whatsapp Group

ಇಂದು ನಗರದ ತ್ಯಾಗರಾಜ ರಸ್ತೆಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶಿವರಾಂಪುರ ನಿರ್ಮಲ ಶಾಲೆ ಪಕ್ಕದಲ್ಲಿರುವ ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್ ವಿಶೇಷ ಚೇತನರ ಆಶ್ರಮದಲ್ಲಿ ಇದೇ ತಿಂಗಳ 22 ರಂದು ಮಕ್ಕಳ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬದ ಆಚರಣೆ ಮಾಡಿಕೊಂಡಿದ್ದೇನೆ.  ಆದರೆ ಈಗಾಗಲೇ ಈ ಹಿಂದೆ ಅಲ್ಲಿನ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಬಂದಂತಹ ಗಣ್ಯಾತಿಗಣ್ಯರು ಹಾಗೂ ಸಚಿವರುಗಳಾಗಲೀ ಅಥವಾ ಶಾಸಕರಾಗಲೀ ಗಮನ ಹರಿಸದಿರುವುದು ನನಗೆ ತುಂಬ ಮನಸ್ಸಿಗೆ ನೋವಾಗಿದೆ ಎಂದು ತಿಳಿಸಿದರು.

ಈ ವಿಚಾರವಾಗಿ ಸರ್ಕಾರದ ಗಮನಸೆಳೆಯಲು ಮತ್ತು ಉಸ್ತುವಾರಿ ಸಚಿವರು ವಿಶೇಷ ಗಮನ ಹರಿಸಿ ತುರ್ತಾಗಿ ಈ ಆಶ್ರಮದ ಅಭಿವೃದ್ಧಿ ಮುಂದಾಗಬೇಕೆಂದು ಒತ್ತಾಯಿಸಿದರು.