ಮನೆ ಅಪರಾಧ ಧಾರವಾಡ: ಸರ್ಕಾರಿ ಅಧಿಕಾರಿ ಪುತ್ರನ ಮದುವೆಯಲ್ಲಿ ವಜ್ರ,‌ಚಿನ್ನ ನಗದು ಕಳವು

ಧಾರವಾಡ: ಸರ್ಕಾರಿ ಅಧಿಕಾರಿ ಪುತ್ರನ ಮದುವೆಯಲ್ಲಿ ವಜ್ರ,‌ಚಿನ್ನ ನಗದು ಕಳವು

0

ಧಾರವಾಡ: ಸರ್ಕಾರಿ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ಮದುವೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನ, ನಗದು ಹಣವನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.

ಧಾರವಾಡದ ಸರ್ಕಾರಿ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ಮದುವೆ ಹುಬ್ಬಳ್ಳಿಯ ವಧುವಿನೊಂದಿಗೆ ಧಾರವಾಡದಲ್ಲಿ ನಡೆಯುತ್ತಿತ್ತು.

ಈ ಮದುವೆಯ ಕಾರ್ಯಕ್ರಮದಲ್ಲಿ ಅಂದಾಜು 800 ಗ್ರಾಂ ಚಿನ್ನ, ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ ಹಾಗೂ ಸುಮಾರು 50 ಲಕ್ಷ ರೂಪಾಯಿ ನಗದನ್ನು ಖದೀಮರು ದೋಚಿದ್ದಾರೆ. ಕಳ್ಳನೊಬ್ಬ ತನ್ನ ಬ್ಯಾಗಿನಲ್ಲಿ ಎಲ್ಲವನ್ನೂ ಹಾಕಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣದ ಕುರಿತು ವಿಷಯ ಸಂಗ್ರಹಿಸುತ್ತಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಹಿಂದಿನ ಲೇಖನಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್
ಮುಂದಿನ ಲೇಖನರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ: ಆರೋಪಿಯ ʻರೇಖಾಚಿತ್ರʼ ಬಿಡುಗಡೆ ಮಾಡಿದ ಎನ್ ಐಎ