ಮನೆ ರಾಜ್ಯ ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್‌ಗಳು ದಾಖಲು

ಪಟಾಕಿ ಸಿಡಿಸಲು ಹೋಗಿ ಅನಾಹುತ – ನಾರಾಯಣ ನೇತ್ರಾಲಯದಲ್ಲಿ 20 ಕೇಸ್‌ಗಳು ದಾಖಲು

0

ಬೆಂಗಳೂರು : ದೀಪಾವಳಿ ಹಿನ್ನೆಲೆ ಪಟಾಕಿ ಸಿಡಿಸಲು ಹೋಗಿ ಅನಾಹುತ ಸಂಭವಿಸಿ ನಾರಾಯಣ ನೇತ್ರಾಲಯದಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿವೆ. ನಾರಾಯಣ ನೇತ್ರಾಲಯದಲ್ಲಿ ಸೋಮವಾರ 5 ಕೇಸ್ ದಾಖಲಾಗಿತ್ತು.

ತಡರಾತ್ರಿ 15 ಕೇಸ್ ದಾಖಲಾಗಿದೆ. ಪಟಾಕಿ ಸಿಡಿಸಲು ಹೋಗಿ ಮಕ್ಕಳು ಗಾಯಗೊಂಡಿದ್ದಾರೆ. ಇನ್ನು ಪಟಾಕಿಯಿಂದ ಅನಾಹುತ ಸಂಭವಿಸಿದ ಪರಿಣಾಮ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ದೀಪಾವಳಿ ಸಂಭ್ರಮ ವೇಳೆ ಪಟಾಕಿ ಹೊಡೆಯುವಾಗ ಹುಷಾರಾಗಿ ಅಂತ ನೇತ್ರಾ ತಜ್ಞರು ಸಲಹೆ ಮಾಡಿದ್ದಾರೆ. ಒಂದು ವೇಳೆ, ಪಟಾಕಿ ಸಿಡಿತದಿಂದ ಕಣ್ಣೆಗೆ ಹಾನಿಯಾದ್ರೆ, ಈ ಕೆಳಗಿನ ನಿಯಮಗಳನ್ನು ಪಾಲಿಸಿ ಅಂತ ಹೇಳಿದ್ದಾರೆ.

ವೈದ್ಯರು ಕೊಟ್ಟಿರೋ ಸಲಹೆಗಳೇನು? – ಕೋಲ್ಡ್, ಸ್ವಚ್ಛ ನೀರಿನಿಂದ ಕಣ್ಣನ್ನು ಸ್ವಚ್ಛಗೊಳಿಸಿ, ಕಣ್ಣನ್ನು ಕೈಯಿಂದ ಉಜ್ಜಿಕೊಳ್ಳಬೇಡಿ, ತಕ್ಷಣ ನೇತ್ರ ತಜ್ಞರನ್ನು ಭೇಟಿ ಮಾಡಿ, ಕಣ್ಣು ಸೂಕ್ಷ್ಮವಾಗಿರುವುದರಿಂದ ಗಾಯವಾದ್ರೂ ನಿರ್ಲಕ್ಷಿಸಬೇಡಿ ಎಂದು ನಾರಾಯಣ ನೇತ್ರಾಲಯ ನಿರ್ದೇಶಕ ಡಾ. ನರೇನ್ ಶೆಟ್ಟಿ ಸಲಹೆ ನೀಡಿದ್ದಾರೆ.