ಮನೆ ರಾಜಕೀಯ ಸೋಲಿಗೆ ಹೆದರಿ ಓಡಿ ಹೋಗಲ್ಲ: ಡಾ.ನಾರಾಯಣಗೌಡ

ಸೋಲಿಗೆ ಹೆದರಿ ಓಡಿ ಹೋಗಲ್ಲ: ಡಾ.ನಾರಾಯಣಗೌಡ

0

ಕೆ.ಆರ್.ಪೇಟೆ: ಪಟ್ಟಣದಲ್ಲಿ ಮಾಜಿಸಚಿವ ಡಾ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ  ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನಾ ಸಭೆ ನೆಡೆಯಿತು.

Join Our Whatsapp Group

ಸಭೆಯಲ್ಲಿ ಮಾತನಾಡಿದ ಅವರು ಸೋಲಿಗೆ ನಾನು ಹೆದರಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಬಿಟ್ಟು ಎಲ್ಲಿಯೂ ಓಡಿ ಹೋಗುವವನಲ್ಲ. ನನ್ನ ಅಳಿವು ಉಳಿವು ನನ್ನ ಜನ್ಮಭೂಮಿಯಾದ ಕೆ.ಆರ್.ಪೇಟೆಯಲ್ಲಿ ಎಂದು  ಘೋಷಿಸಿದರು.

 ನನ್ನ ರಾಜಕೀಯ ಜೀವನದಲ್ಲಿ ಸೋಲು ಗೆಲುವು ಎರಡನ್ನೂ ನಾನು ಸಮಾನವಾಗಿ ಕಂಡಿದ್ದೇನೆ. ಸಚಿವನಾಗಿಯೂ ಕೆಲಸ ಮಾಡಿದ್ದೇನೆ.ನಾನು ಕೆಲಸ ಮಾಡಿದ ಬಗ್ಗೆ ಆತ್ಮತೃಪ್ತಿಯಿದೆ ಎಂದರು.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ನಾನು ನೂತನ ಸರ್ಕಾರದಲ್ಲಿ ವ್ಯವಹರಿಸುವ ಜೊತೆಗೆ ಕ್ಷೇತ್ರದ ನೂತನ ಶಾಸಕರಿಗೆ ಅಗತ್ಯ ಸಹಕಾರ ನೀಡಲು ಬದ್ಧನಿದ್ದೇನೆ ಎಂದರು.

ನನ್ನ ವಿರುದ್ಧ ಏಕವಚನದಲ್ಲಿ ಮಾತನಾಡಿ ಸುಳ್ಳು ಆರೋಪಗಳನ್ನು ಮಾಡುತ್ತಿರುವ  ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲುರವಿ ತನ್ನ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ, ಆತನಿಗೆ ಬುದ್ಧಿ ಕಲಿಸುವುದು ಹೇಗೆಂದು ನನಗೆ ಗೊತ್ತಿದೆ.ಕ್ಷೇತ್ರದಲ್ಲಿ ಗೂಂಡಾಗಿರಿ ಗಲಾಟೆ ಗದ್ದಲ ನಡೆಯಲು ನಾನು ಬಿಡಲ್ಲ. ನನ್ನ ಜೀವನದ ಕೊನೆಯ ಉಸಿರಿನವರೆಗೂ ಕ್ಷೇತ್ರದ ಜನತೆಯ ಸೇವಕನಂತೆ ಕೆಲಸ ಮಾಡುತ್ತೇನೆ. ನಾನು ಕೆ.ಆರ್.ಪೇಟೆ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.ನಾನು ಸತ್ತಾಗ ನನ್ನ ದೇಹವು ಮಣ್ಣಾಗುವುದು ಜನ್ಮಭೂಮಿಯ ಮಣ್ಣಿನಲ್ಲಿ ಎಂದು ಭಾವುಕರಾಗಿ ಹೇಳಿದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭಾ ಸದಸ್ಯ ಬಸ್ ಸಂತೋಷ್ ಕುಮಾರ್, ತಾ.ಪಂ.ಮಾಜಿಅಧ್ಯಕ್ಷ ಜವರಾಯಿಗೌಡ,ಬಂಡಿಹೊಳೆ ಅಶೋಕ್, ಚೋಕನಹಳ್ಳಿ ಪ್ರಕಾಶ್, ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದರು.

ಹಿಂದಿನ ಲೇಖನ2,000 ನೋಟು ಹಿಂಪಡೆದ ಆರ್’ಬಿಐ: ಸೆ.30ರ ವರೆಗೆ ಬ್ಯಾಂಕ್ ಗಳಲ್ಲಿ ನೋಟ್ ಬದಲಾವಣೆಗೆ ಅವಕಾಶ
ಮುಂದಿನ ಲೇಖನಅದಾನಿ ಪ್ರಕರಣ: ನಿಯಮ ಉಲ್ಲಂಘನೆ, ಷೇರು ದರ ತಿರುಚಿರುವಿಕೆಗೆ ಸದ್ಯಕ್ಕೆ ಸಾಕ್ಷಿಯಿಲ್ಲ ಎಂದ ಸಮಿತಿ