ಮನೆ ಅಪರಾಧ ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ: ಅಪಾಯದಿಂದ ಪಾರು

ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ: ಅಪಾಯದಿಂದ ಪಾರು

0

ಕಡೂರು: ಮಾಜಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿಯವರ ಕಾರು ಸೋಮವಾರ ಬೆಳಿಗ್ಗೆ ಅಪಘಾತವಾದ ಘಟನೆ ಕಡೂರು ತಾಲೂಕಿನ ಹೇಮಗಿರಿ ಗೇಟಿನ ಬಳಿ ನಡೆದಿದೆ.

Join Our Whatsapp Group

ಬೆಳಗ್ಗೆ 9.40 ಸುಮಾರಿಗೆ ಅಪಘಾತ ಸಂಭವಿಸಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.

ಮಾಜಿ‌ ಸಚಿವ ಮಾಧುಸ್ವಾಮಿ ಅವರ‌ ಕಾರು ಹಾಸನ‌ ಕಡೆಗೆ ತೆರಳುತ್ತಿತ್ತು. ಈ ವೇಳೆ‌ ಗುಜರಿ ಸಂಗ್ರಹಿಸುವ ಆಟೋವೊಂದು ಅಡ್ಡ ಬಂದಿದ್ದು ಆಟೋಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತವಾಗಿದೆ.

ಗುಜರಿ ಆಟೋ ಬಾಣಾವರದ ರಫೀಕ್ ಎಂಬುವರಿಗೆ ಸೇರಿದ್ದಾಗಿದೆ. ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

ಸಚಿವರ ಕಾರಿನ ಮುಂಭಾಗಕ್ಕೆ ಸ್ವಲ್ವ ಹಾನಿಯಾಗಿದೆ. ಅಪಘಾತ ಸಂಭವಿಸಿ ಬಳಿಕ ಮಾಜಿ ಸಚಿವ ಮಾಧುಸ್ವಾಮಿ ತಾವು ಚಲಿಸುತ್ತಿದ್ದ ಕಾರನ್ನು ಅಲ್ಲಿಯೇ‌ ಬಿಟ್ಟು ಬೇರೊಂದು ಕಾರಿನಲ್ಲಿ ತೆರಳಿದ್ದಾರೆ.

ಹಿಂದಿನ ಲೇಖನಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್​ ಎಟಿಎಂಗೆ ಬೆಂಕಿ- 5 ಲಕ್ಷ ಹಣ ಭಸ್ಮ
ಮುಂದಿನ ಲೇಖನಸೋಮವಾರದ ಒಳಗೆ ಬರ ಪರಿಹಾರ ಬಿಡುಗಡೆ ಕೇಂದ್ರ ಸರ್ಕಾರ ಒಪ್ಪಿಗೆ