ಮನೆ ಸ್ಥಳೀಯ ದಸರಾ ಗಜಪಡೆಗೆ ಬೀಳ್ಕೊಡುಗೆ: ಲಾರಿ ಏರಲು ಸತಾಯಿಸಿದ ಏಕಲವ್ಯ

ದಸರಾ ಗಜಪಡೆಗೆ ಬೀಳ್ಕೊಡುಗೆ: ಲಾರಿ ಏರಲು ಸತಾಯಿಸಿದ ಏಕಲವ್ಯ

0

ಮೈಸೂರು: ದಸರಾ ಜಂಬೂಸವಾರಿಯಲ್ಲಿ  ಪಾಲ್ಗೊಂಡ ಗಜಪಡೆಗೆ ಸೋಮವಾರ ಇಲ್ಲಿನ ಅರಮನೆ ಆವರಣದಿಂದ ಬೀಳ್ಕೊಡಲಾಯಿತು‌.

Join Our Whatsapp Group

ಅಭಿಮನ್ಯು ನೇತೃತ್ವದ 13 ಆನೆಗಳು ಒಟ್ಟಿಗೆ ಸೊಂಡಿಲನ್ನೆತ್ತಿ ಕೃತಜ್ಞತೆ ಸಲ್ಲಿಸುತ್ತ  ನಾಡಿನಿಂದ ಮತ್ತೆ ಕಾಡಿನತ್ತ ಹೊರಟವು. ಈ ವೇಳೆ ಏಕಲವ್ಯ ಆನೆಯು ಲಾರಿ ಏರಲು ಮೂರ್ನಾಲ್ಕು ನಿಮಿಷ ಸತಾಯಿಸಿತು. ಆನೆಗಳ ನಿರ್ಗಮನ ಕಂಡು ಜನರು ಕಣ್ಣೀರಿಟ್ಟರು. ಮಳೆಯೂ ಜೊತೆಗೂಡಿತು.

ಇದಕ್ಕೂ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.