ಮನೆ ರಾಜಕೀಯ ನಿಮ್ಮ ಬಣವನ್ನು ಡಿಕೆಶಿ ಚಿಂದಿ ಮಾಡುತ್ತಾರೆಂಬ ಭಯವೇ ?: ಸಿದ್ದರಾಮಯ್ಯ ಬಿಜೆಪಿ ಪ್ರಶ್ನೆ

ನಿಮ್ಮ ಬಣವನ್ನು ಡಿಕೆಶಿ ಚಿಂದಿ ಮಾಡುತ್ತಾರೆಂಬ ಭಯವೇ ?: ಸಿದ್ದರಾಮಯ್ಯ ಬಿಜೆಪಿ ಪ್ರಶ್ನೆ

0

ಬೆಂಗಳೂರು: ನಿಮ್ಮ ಬಣವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚಿಂದಿ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭಾರತೀಯ ಜನತಾ ಪಕ್ಷ ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಅವರೇ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಪ್ರಶ್ನೆ ಬಂದಾಗ ನೀವು ಮೌನಕ್ಕೆ ಶರಣಾಗುವುದೇಕೆ? ನಿಮ್ಮ ಬಣವನ್ನು ಡಿಕೆಶಿ ಅವರು ಚಿಂದಿ ಮಾಡುತ್ತಾರೆ ಎಂಬ ಭಯ ಕಾಡುತ್ತಿದೆಯೇ? ಅಥವಾ ಒಳ ಜಗಳ ಅನಾವರಣವಾದರೆ ಜನರು ತಿರಸ್ಕರಿಸಬಹುದೆಂಬ ಆತಂಕವೋ?’ ಎಂದು ಬಿಜೆಪಿಯ ರಾಜ್ಯ ಘಟಕ ಟ್ವೀಟ್ ಮಾಡಿದೆ.

ಡಿ.ಕೆ. ಶಿವಕುಮಾರ್ ವಿರುದ್ಧ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರಿಗೆ ಜನರ ಪರಿಚಯ ಇಲ್ಲವೋ ಅವರಿಗೆ ಮಾತ್ರ ದೊಡ್ಡ ಫೋಟೋ ಇರುವ ಪೋಸ್ಟರ್ ಬೇಕಾಗುತ್ತದೆ ಎಂದಿರುವುದು ಡಿಕೆಶಿಯವರನ್ನೇ ಉದ್ದೇಶಿಸಿ ಅಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.

ಹಿಂದಿನ ಲೇಖನನವೀನ್ ಮೃತದೇಹ  ತರಲು ಪ್ರಯತ್ನ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಬೇಸಿಕ್ ಸೆಟ್‌ನಿಂದಲೂ ಹಣ ಪಾವತಿಗೆ ಅವಕಾಶ: ಆರ್‌ಬಿಐ