ಮನೆ ರಾಜ್ಯ ಬಾಟಲಿಗೆ ಪೆಟ್ರೊಲ್ ತುಂಬಿಸುವಾಗ ಅಗ್ನಿ ಅವಘಡ: ವಿದ್ಯಾರ್ಥಿನಿ ಸಾವು

ಬಾಟಲಿಗೆ ಪೆಟ್ರೊಲ್ ತುಂಬಿಸುವಾಗ ಅಗ್ನಿ ಅವಘಡ: ವಿದ್ಯಾರ್ಥಿನಿ ಸಾವು

0

ತುಮಕೂರು: ತುಮಕೂರು: ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ತಾಲೂಕಿನ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಸೌಂದರ್ಯ (16) ಮೃತ ವಿದ್ಯಾರ್ಥಿನಿ.

ಶುಕ್ರವಾರ ರಾತ್ರಿ ವಿದ್ಯುತ್ ಇಲ್ಲದ ವೇಳೆಯಲ್ಲಿ ಸೌಂದರ್ಯ ಮೊಂಬತ್ತಿ ಬೆಳಕಿನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಳು. ತಕ್ಷಣ ವಿದ್ಯುತ್ ಬಂದಾಗ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್ ಬಾಟಲಿಯನ್ನ ಕೆಳಗೆ ಬಿಟ್ಟಿದ್ದಳು. ಈ ವೇಳೆ ಮೊಂಬತ್ತಿ ಕಿಡಿ ತಗುಲಿ ಬೆಂಕಿ ಹತ್ತಿಕೊಂಡು ಸೌಂದರ್ಯ ಗಂಭೀರವಾಗಿ ಗಾಯಗೊಂಡಿದ್ದಳು.

ಕೂಡಲೇ ಗಾಯಾಳು ಸೌಂದರ್ಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೌಂದರ್ಯ ಮೃತಪಟ್ಟಿದ್ದಾಳೆ. ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

ಹಿಂದಿನ ಲೇಖನಮೈಸೂರಿನಲ್ಲಿ ಕ್ರೈಮ್ ರೇಟ್ ಕಡಿಮೆಯಾಗಿದೆ: ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್
ಮುಂದಿನ ಲೇಖನಶಿವಮೊಗ್ಗ: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ