ಮನೆ ರಾಷ್ಟ್ರೀಯ ದೇವಾಲಯದ ಕೊಳದಲ್ಲಿ ಮುಳುಗಿ ಐವರು ಯುವಕರ ಸಾವು

ದೇವಾಲಯದ ಕೊಳದಲ್ಲಿ ಮುಳುಗಿ ಐವರು ಯುವಕರ ಸಾವು

0

ಚೆನ್ನೈ: ಕೊಳದಲ್ಲಿ ಮುಳುಗಿ ಐವರು ಯುವಕರು ಮೃತಪಟ್ಟಿರುವ ಘಟನೆ ದಕ್ಷಿಣ ಚೆನ್ನೈನ ಉಪನಗರವಾದ ಕೀಲ್ಕತ್ತಲೈ ಬಳಿಯ ಮೂವರ್ ಸಂಪೇಟ್ ನಲ್ಲಿ ಬುಧವಾರ ಮುಂಜಾನೆ ನಡೆದಿದೆ.

Join Our Whatsapp Group

ದೇವಸ್ಥಾನದಲ್ಲಿ ಪುರೋಹಿತರು, ಸ್ವಯಂಸೇವಕರು ಹಾಗೂ ಭಕ್ತರು ಸೇರಿ ಕೊಳದಲ್ಲಿ ಧಾರ್ಮಿಕ ವಿಧಾನದ ಭಾಗವಾಗಿ ವೃತ್ತವನ್ನು ರಚಿಸಿದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಡಿಪಾಕ್ಕಂನ ರಾಘವನ್, ಕೀಲ್ಕತ್ತಲೈನ ಯೋಗೇಶ್ವರನ್ ಮತ್ತು ನಂಗನಲ್ಲೂರಿನ ವನೇಶ್, ರಾಘವನ್ ಮತ್ತು ಆರ್.ಸೂರ್ಯ ಮೃತ ಯುವಕರು.

ಮೃತರು 18 ರಿಂದ 25 ವರ್ಷದೊಳಗಿನವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತ ದೇಹಗಳನ್ನು ವರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಮೃತರ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.

ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಕೊಂಡಿದ್ದು ತನಿಖೆ ಮಾಡುತ್ತಿದ್ದಾರೆ.

ಹಿಂದಿನ ಲೇಖನಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಬಿಜೆಪಿ ಸೇರ್ಪಡೆ
ಮುಂದಿನ ಲೇಖನ‘ಅಭಿರಾಮಚಂದ್ರ’ ಚಿತ್ರದ ಟೀಸರ್ ಮೆಚ್ಚಿದ ನಟ ಶಿವರಾಜ್ ಕುಮಾರ್