- ಮಕ್ಕಳ ಎಡವಿಗೆ ಪೇಪ್ಪರ್ ಮೆಂಟ್ ಹೂವನ್ನು ಮೆಳೆ ಕಾಳಿಂಗನ ಸೊಪ್ಪಿನ ರಸದಲ್ಲಿ ಸೇರಿಸಿ ಕುಡಿಸಿದರೆ ಎಲವು, ಶೀತ ನಿವಾರಣೆ ಆಗುವುದು.
- ಓಮಿನ ಹೂವು ಬೆಳ್ಳುಳ್ಳಿ ಈ ಹಿಲಕು, ಅಡಿಗೆ ಸೋಡ ಸೇರಿಸಿ ಅರೆದು ಒಲೆಯಲ್ಲಿ ಐದು ತೊಟ್ಟು ಹಾಕಿ ಜೇನು ಬೆರೆಸಿ ಕುಡಿಸಿದರೆ ನಿವಾರಣೆ ಆಗುವುದು.
- ಎಣ್ಣೆ ಬಿಳಿಗಾರವನ್ನು ಅರಳು ಮಾಡಿ ಒಂದು ಚಿಟಿಕೆ ಹಾಲಿನಲ್ಲಿ ಅಥವಾ ಜೇನು ಸೇರಿಸಿ,ಕುಡಿಸುವುದರಿಂದ ಗುಣವಾಗುವುದು.
- ತುಂಬೇರಸವನ್ನು ಹಾಲಿನಲ್ಲಿ ಹಾಕಿ ಕುಡಿಸಿದರೆ ಎಳುವು ನಿವಾರಣೆ ಆಗುವುದು
- ತುಳಸಿ ಸೊಪ್ಪಿನ ರಸ ತೆಗೆದು ಜೇನಿನಲ್ಲಿ ಕುಡಿಸಲು ಎಳವು ಗುಣವಾಗುವುದು.
- ಬಸುರಿಯಾದ ಮೂರನೇ ತಿಂಗಳು ಅಥವಾ ಐದನೇ ತಿಂಗಳು ಗಜ್ಜುಗದ ಚಿಗುರು ತಂದು ಹಸಿವಿನ ಹಾಲಿನಲ್ಲಿ ಅರೆದು ಕುಡಿಸುವುದರಿಂದ ಗರ್ಭ ನಿಲ್ಲುತ್ತದೆ.
- ಗರ್ಭಿಣಿಯರಾದ ಮೊದಲನೇ ತಿಂಗಳಿನಿಂದ ಪ್ರತಿದಿನ ಒಂದೊಂದು ನಿಂಬೆಹಣ್ಣನ್ನು ಆಹಾರದಲ್ಲಿ ಉಪಯೋಗಿಸುತ್ತಾ ಬಂದರೆ ಚರ್ಮದಾ ಮಾಂಸ ಖಂಡಗಳು ಒಂದಕ್ಕೊಂದು ಬಿಗಿಯಾಗಿ,, ಗರ್ಭ ನಿಲ್ಲಲು ಸಹಾಯಕವಾಗುತ್ತದೆ.
- ಗರ್ಭಿಣಿಯರು ಪ್ರತಿದಿನವೂ ಹಾಲನ್ನು ಚೆನ್ನಾಗಿ ಸೇವಿಸುತ್ತಿರಬೇಕು.ಬೆಳಗ್ಗೆ ಒಂದು ಲೋಟ,ರಾತ್ರಿ ಮಲಗುವಾಗ ಒಂದು ಲೋಟ ಸಕ್ಕರೆ ಬೆರೆಸಿ ಕುಡಿಯುತ್ತಿರಬೇಕು.
- ಎಲ್ಲ ವಿಧವಾದ ತರಕಾರಿಗಳನ್ನು ಎಲ್ಲಾ ವಿಧವಾದ ಹಣ್ಣುಗಳನ್ನೂ ಆದಷ್ಟು ತಿನ್ನುವುದರಿಂದ ಯಾವ ದೋಷವೂ ಉಂಟಾಗುವುದಿಲ್ಲ
- ಮೊಳೆತ ಹೆಸರುಕಾಳು, ಕಡಲೆ ಕಾಳು, ಹುರುಳಿಕಾಳುಗಳನ್ನು ಕೋಸಂಬರಿಗಳಾಗಿ ಸೇವಿಸಬೇಕು ಹಾಗೂ ಹುಳಿ, ಸಾರು,ಪಲ್ಯದ ರೂಪದಲ್ಲಿ ತಿನ್ನುತ್ತಾ ಬರುವುದರಿಂದ ಹೆಚ್ಚಿನ ಫಲಿತಾಂಶದ ದೊರಕುವುದು.