ಬೆಂಗಳೂರು(Bengaluru): ನಟ ದಿವಂಗತ ಪುನೀತ್ ರಾಜ್ಕುಮಾರ್ ಪಾಲ್ಗೊಂಡಿದ್ದ ಡಾಕ್ಯುಚಿತ್ರ ‘ಗಂಧದಗುಡಿ’ಯ ಬಿಡುಗಡೆ ಪೂರ್ವ ಕಾರ್ಯಕ್ರಮ (ಪ್ರಿ ರಿಲೀಸ್ ಈವೆಂಟ್) ಅಕ್ಟೋಬರ್ 21ರಂದು ಸಂಜೆ 6.30ಕ್ಕೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ.
‘ಅಪ್ಪು (ಪುನೀತ್) ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡ ಈ ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ, ಪರಿಸರ, ಜೀವ ವೈವಿಧ್ಯ ಎಲ್ಲವೂ ಚಿತ್ರಣಗೊಂಡಿವೆ. ಅ. 29ಕ್ಕೆ ಪುನೀತ್ ನಿಧನರಾಗಿ ಒಂದು ವರ್ಷ ಆಗುತ್ತದೆ.
ಇದೇ ಹೊತ್ತಿನಲ್ಲಿ ಅವರನ್ನು ಮತ್ತೆ ತೆರೆಯ ಮೇಲೆ ತರಲು ನಮ್ಮ ಕುಟುಂಬ ಹಾಗೂ ಚಿತ್ರರಂಗದ ಎಲ್ಲರೂ ಒಂದಾಗಿದ್ದೇವೆ ಎಂದು ಪುನೀತ್ ಸಹೋದರ, ನಟ ರಾಘವೇಂದ್ರ ರಾಜ್ಕುಮಾರ್ ಹೇಳಿದರು.
ಪಿಆರ್ಕೆ ಪ್ರೊಡಕ್ಷನ್ಸ್ ಅಡಿ ಪುನೀತ್ ಪತ್ನಿ ಅಶ್ವಿನಿ ಅವರ ನೇತೃತ್ವದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಈ ಚಿತ್ರದಲ್ಲಿ ಪುನೀತ್ ಸಾಮಾನ್ಯನಾಗಿಯೇ ಕಾಣಿಸಿಕೊಂಡಿದ್ದಾರೆ. ಅವರ ಆಸೆಯಂತೆ ಈ ಚಿತ್ರವನ್ನು ನಾಡಿನ ಜನತೆ ವೀಕ್ಷಿಸಿ ಸಂಭ್ರಮಿಸುವಂತಾಗಬೇಕು ಎಂದು ಅವರು ಕೋರಿದರು.
ಮುಖ್ಯಮಂತ್ರಿ, ವಿವಿಧ ಸಚಿವರು, ಅಧಿಕಾರಿಗಳು, ಚಿತ್ರರಂಗದ ಪ್ರಮುಖ ಗಣ್ಯರು, ನಟರು ಭಾಗವಹಿಸಲಿದ್ದಾರೆ. ಯಶ್, ಸೂರ್ಯ, ರಾಣಾ ದಗ್ಗುಬಾಟಿ, ಕುನಾಲ್ ಗಾಂಜಾವಾಲಾ, ಬಾಲಯ್ಯ ಸೇರಿದಂತೆ ಹಲವಾರು ಮಂದಿ ಬರಲಿದ್ದಾರೆ.
ಶಿವರಾಜ್ಕುಮಾರ್, ಪ್ರಭುದೇವ, ರಮ್ಯಾ ಅವರ ನೃತ್ಯ ಕಾರ್ಯಕ್ರಮವಿದೆ. ಒಟ್ಟಿನಲ್ಲಿ ಹಾಡು, ಮನೋರಂಜನೆಯ ಉತ್ಸವ ಇದಾಗಿರಲಿದೆ. ಅಪ್ಪು ಅವರಿಗೆ ಊಟ ಅತ್ಯಂತ ಪ್ರಿಯವಾಗಿತ್ತು. ಆದ್ದರಿಂದ ವಿವಿಧ ಹೋಟೆಲ್ನವರು ಆಹಾರ ಮೇಳವನ್ನೂ ಹಮ್ಮಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮಕ್ಕಾಗಿ ಅರಮನೆ ಮೈದಾನದಲ್ಲಿ (ಕೃಷ್ಣ ವಿಹಾರ ಗೇಟ್ ನಂ 1) ಬೃಹತ್ ವೇದಿಕೆ ಹಾಕಲಾಗಿದೆ. ಧ್ವನಿ, ಬೆಳಕಿನ ಸಂಯೋಜನೆ, ಆಸನ, ಭದ್ರತಾ ವ್ಯವಸ್ಥೆ ಭರದಿಂದ ಸಾಗಿದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.